Saturday, January 31, 2009

ಕಾ: ಭೀಮ ಕಾಯ ಲೇ : ಭೈರಪ್ಪ

ಭೀಮ ಕಾಯ ಒಂದು ಸರಳ ಸುಂದರ ವಿಭಿನ್ನ ಪ್ರೇಮ ಕಥಾನಕ. ಕಥೆ ಸರಳವಾಗಿದ್ದರೂ ಭೈರಪ್ಪನವರ ಅಧ್ಯಯನ ಶೀಲ ಮನೋಭಾವನೆ ಅವರ ಕಾದಂಬರಿಗಳಲ್ಲಿ ಬಿಂಬಿತವಾಗಿದೆ.

ಭಿತ್ತಿ ಕಾದಂಬರಿಯಲ್ಲಿ ಭೈರಪ್ಪನವರೇ ಹೇಳುವಂತೆ ಕುಸ್ತಿ ಪಟುಗಳ ಜೀವನವನ್ನು ಬಹಳ ಹತ್ತಿರದಿಂದ ನೋಡಿದವರು. ಇಂತದ್ದೆ ಒಂದು ಕತೆ ಈ ಭೀಮಕಾಯ.

ಸುಬ್ಬು ಎಂಬಾತ ಒಬ್ಬ ಅಪ್ರತಿಮ ಕುಸ್ತಿಪಟು. ಹನುಮಂತ ಹಾಗು ಅಂಬಾ ಭವಾನಿ ದೇವರ ಭಕ್ತ. ಮೈಸೂರು ಹಾಗು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅವನನ್ನು ಮೀರಿಸಿದ ಕುಸ್ತಿ ಪಟು ಇರಲಿಲ್ಲ. ಸುಬ್ಬು ಮೈಸೂರು ಪ್ರಾಂತ್ಯಕ್ಕೆ ಒಬ್ಬ ಕೊರಪಿಟ್ ಆಗಿರುತ್ತಾನೆ. ತಂಜಾವೂರು, ಧಾರವಾಡ, ಬೆಂಗಳೂರು ಹೀಗೆ ಅನೇಕ ಪ್ರದೇಶಗಳಲ್ಲಿ ಕುಸ್ತಿ ಪಂದ್ಯದಲ್ಲಿ ಗೆದ್ದಿರುತ್ತಾನೆ.
ಭೈರಪ್ಪನವರು ಕುಸ್ತಿ ಅಂದರೇನು, ಗರಡಿ ಮನೆ ಹೇಗಿರುತ್ತದೆ?, ಕುಸ್ತಿ ಹೊಡೆತದ ವಿಧಾನಗಳಾವುವು, ಕುಸ್ತಿ ಪಂದ್ಯದಲ್ಲಿ ಆಗುವ ಮೋಸಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ. ಬೇರೆ ಬೇರೆ ಪ್ರಾಂತ್ಯದ ಕುಸ್ತಿ/ಕುಸ್ತಿ ಪಟು ಗಳು ಹೇಗಿರುತ್ತಾರೆಂದು ಸೊಗಸಾಗಿ ವಿವರಿಸುತ್ತಾರೆ.

ತನ್ನ ವೃತ್ತಿಯಲ್ಲಿ ಸುಬ್ಬುವಿಗೆ ಸ್ನೇಹಿತರು ಹಾಗು ದ್ವೇಷಿಗಳು ಇಬ್ಬರು ಇದ್ದರು.

ಇಂಥಹ ಒಬ್ಬ ಕುಸ್ತಿ ಪಟು ಪುಟ್ಟು ಅಂಥ ಸ್ನೇಹಿತನ ವಂಚನೆ ಇಂದ ಒಬ್ಬ ಸೂಳೆಯ ಗೆಳೆತನ ಬೆಳೆಸುತ್ತಾನೆ. ಆಕೆಯೇ ರಾಜಮ್ಮ.
ರಾಜಮ್ಮ ಸುಬ್ಬುವನ್ನು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತಿರುತ್ತಾಳೆ. ದಿನ ಕಳೆದಂತೆ ಸುಬ್ಬುವು ರಾಜಮ್ಮನ ಪ್ರೀತಿಗೆ ಸಂಪೂರ್ಣವಾಗಿ ಒಳಪಡುತ್ತಾನೆ. ಆಕೆಯ ಸ್ನೇಹ ಭಾವ, ಪ್ರೀತಿ, ಎಲ್ಲಕ್ಕೂ ಮನ ಸೋಲುತ್ತಾನೆ. ಆಕೆಯನ್ನು ತನ್ಮಯ ಚಿತ್ತನಾಗಿ ಪ್ರೀತಿಸ ತೊಡಗುತ್ತಾನೆ. ನಿಧಾನವಾಗಿ ಕುಸ್ತಿಯ ಅಭ್ಯಾಸವನ್ನು ಬಿಡುತ್ತಾನೆ.

ಮೈಸೂರಿಗೆ ಕೊರಪಿಟ್ ಅಂತ ಹೆಸರು ಮಾಡಿದ ಸುಬ್ಬು ಒಬ್ಬ ಸಾಧಾರಣ ಪಂಜಾಬಿ ಕುಸ್ತಿ ಪಟುವಿಗೆ ಸೋಲುತ್ತಾನೆ. ಇತ್ತ ಸುಬ್ಬುವಿನ ಸ್ನೇಹಿತ ಚಂದ್ರು ಪುತ್ತುವಿನ ಸಹಾಯದಿಂದ ರಾಜಮ್ಮ ನನ್ನು ಬೇಟಿ ಮಾಡುತ್ತಾನೆ. ಸುಬ್ಬುವು ತನ್ನ ವೃತ್ತಿ ಜೀವನವನ್ನು ಹಾಳು ಮಾಡಿ ಕೊಲ್ಲದಂತೆ ತಡೆಯಬೇಕು ಅಂದು ಬೇಡಿ ಕೊಳ್ಳುತ್ತಾನೆ. ರಾಜಮ್ಮನಿಗೆ ಚಂದ್ರುವು ಒಬ್ಬ ಅಣ್ಣನ ರೀತಿ ಕಾಣಿಸುತ್ತಾನೆ. ತಾನು ಸುಬ್ಬುವನ್ನು ಹೇಗಾದರೂ ಮೊದಲಿನಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾಳೆ. ರಾಜಮ್ಮ, ತನ್ನಂತವಳಿಂದ ಸುಬ್ಬುವಿನ ಜೀವನ ಹಾಳಾಯಿತಲ್ಲ ಎಂದು ದುಃಖ ಪಡುತ್ತಾಳೆ.

ಸುಬ್ಬುವನ್ನು ತನ್ನ ವೃತ್ತಿಯ ಕಡೆ ತಿರುಗಿಸಲು ಬಹಳ ಪ್ರಯತ್ನಿಸುತ್ತಾಳೆ. ಇತ್ತ ಸುಬ್ಬುವಿನ ತಂದೆ ಮರಿಯಪ್ಪನವರಿಗೆ ಸುಬ್ಬುವಿನ ಬಗ್ಗೆ ತಿಳಿಯುತ್ತದೆ. ತನ್ನ ಮಗನನ್ನು ಒಬ್ಬ ಅತ್ಯುತ್ತಮ ಕುಸ್ತಿ ಪಟು ವನ್ನಾಗಿ ಮಾಡಿ ತನ್ನ ಸ್ನೇಹಿತ ಬಸಪ್ಪನ ಮಗಳು ಗೌರಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೊಂಡಿರುತ್ತಾನೆ. ಮಗನ ಪರಿಸ್ಥಿತಿ ನೋಡಿ ಮರಿಯಪ್ಪನವರು ಹಾಸಿಗೆ ಹಿಡಿಯುತ್ತಾರೆ. ಸುಬ್ಬುವಿಗೆ ಕಾರಣ ತಿಳಿದಿದ್ದರೂ,

ರಾಜಮ್ಮನನ್ನು ದೂರ ಮಾಡಿ ಕೊಳ್ಳಲು ಸದ್ಯವಾಗದೆ ಖಿನ್ನನಾಗುತ್ತಾನೆ.
ಇದ್ದಕಿದ್ದ ಹಾಗೆ ಒಂದು ದಿನ ಸುಬ್ಬು ಕಾಣೆಯಾಗುತ್ತಾನೆ. ಎಷ್ಟು ಹುದುಕಿಸಿದರು ಸುಬ್ಬುವಿನ ಸುಳಿವು ಇರುವಿದಿಲ್ಲ. ರಾಜಮ್ಮ ತನ್ನಿಂದ ಹೀಗೆ ಆಯಿತೆಂದು ದುಃಖ ಪಡುತ್ತಾಳೆ. ಈ ಹೊತ್ತಿಗೆ ರಾಜಮ್ಮ ಉದರದಲ್ಲಿ ಸುಬ್ಬುವಿನ ಮಗು ಬೆಳೆಯುತ್ತಿರುತ್ತದೆ. ರಾಜಮ್ಮನಿಗೆ ಸುಬ್ಬುವಿನ ಗೆಳೆತನಕ್ಕಿಂತ ಏನು ಬೇಕಾಗಿರುವುದಿಲ್ಲ.
ಚಂದ್ರುವಿಗೆ ಸುಬ್ಬುವಿನ ಕಾಗದ ಒಂದು ಬರುತ್ತದೆ. ಸುಬ್ಬುವು ತಾನು ತನ್ನ ತಂದೆಗೆ ನಂಬಿದವರಿಗೆ ಮೋಸ ಮಾಡಿದೆನೆಂದು, ತನ್ನ ತಂದೆಯ ಆಸೆಯಂತೆ ವೃತ್ತಿಯಲ್ಲಿ ಕೊರಪಿಟ್ ಆಗಬೇಕೆಂದು, ಅಂತೋನಿ ಸಹಾಯದಿಂದ ಸೊಲ್ಲಾಪುರದ ಗರಡಿ ಮನೆಯಲ್ಲಿ ಕಲಿಯುತ್ತಿರುವುದಾಗಿ ತಿಳಿಸುತ್ತಿರುತ್ತಾನೆ. ಚಂದ್ರುವು ಸಂತಸ ಗೊಂಡು ಇತರರಿಗೂ ತಿಳಿಸಿ ಸೊಲ್ಲಾಪುರದ ಕಡೆಗೆ ಹೊರಡುತ್ತಾನೆ. ರಾಜಮ್ಮ ಸುಬ್ಬುವಿಗೆ ಒಂದು ಕಾಗದವನ್ನು ಕೊಡುತ್ತಾಳೆ.
ಚಂದ್ರು ಸುಬ್ಬು ಬದಲಾದುದನ್ನು ಕಂಡು ಸಂತೋಷ ಪಡುತ್ತಾನೆ. ಸುಬ್ಬುವಿನ ವೃತ್ತಿ ಜೀವನ ಹಾಳು ಮಾಡಲು ಮೈಲಾರಿ ಮತ್ತು ಸ್ನೇಹಿತರು ಕುತಂತ್ರ ಮಾಡಿ ರಾಜಮ್ಮನ ಪರಿಚಯ ಸುಬ್ಬುವಿಗೆ ಮಾಡಿಸಿದುದು ತಿಳಿಯುತ್ತದೆ. ಆದರೆ ರಾಜಮ್ಮ ದೇವತೆಯಂತ ಹೆಂಗಸು ಎಂಬುದು ಅರಿವಿರುತ್ತದೆ.
ಸುಬ್ಬು ಮತ್ತೆ ಮೊದಲಿನ ಸುಬ್ಬು ವಾಗಿರುತ್ತಾನೆ. ಹಲವಾರು ಕುಸ್ತಿಗಳಲ್ಲಿ ಗೆದ್ದಿರುತ್ತಾನೆ. ಚಂದ್ರು ಸುಬ್ಬುವಿಗೆ ತಿಳಿಸಿ ಪಂಜಾಬಿ ಕುಸ್ತಿ ಪಟುವಿನ ಮೇಲೆ ಬಾಜಿ ಕಟ್ಟಿಸುತ್ತಾನೆ. ಈ ಭಾರಿ ಸುಬ್ಬು ಒಂದೇ ಬಾರಿಗೆ ಪಂಜಬಿಯನ್ನು ಸೋಲಿಸಿ ಮೈಸೂರಿಗೆ ಕೊರಪಿಟ್ ಆಗುತ್ತಾನೆ.
ಸುಬ್ಬು ರಾಜಮ್ಮನ್ನನ್ನು ಬೇಟಿ ಮಾಡುತ್ತಾನೆ. ತನ್ನ ಮಗುವನ್ನು ನೋಡಿ ಸಂತೋಷ ಪಡುತ್ತಾನೆ. ರಾಜಮ್ಮ ಸುಬ್ಬುವಿಗೆ ಗೌರಿ ಯನ್ನು ಮದುವೆಯಾಗಬೇಕೆಂದು ಹಾಗು ತನ್ನ ಸ್ನೇಹವನ್ನು ಮುಂದುವರಿಸಬೇಕೆಂದು ಕೋರಿ ಕೊಳ್ಳುತ್ತಾಳೆ. ಕಡೆಗೆ ಸುಬ್ಬು ಒಪ್ಪಿ ಗೌರಿಯನ್ನು ಮದುವೆ ಮಾಡಿ ಕೊಳ್ಳುತ್ತಾನೆ. ಗೌರಿಗೆ ತನ್ನ ಜೀವನದ ಪೂರ ವೃತ್ತಾಂತ ವನ್ನು ತಿಳಿಸುತ್ತಾನೆ. ರಾಜಮ್ಮನಿಗೆ ಒಳ್ಳೆಯ ಸ್ನೇಹಿತನಾಗಿ ಮುಂದುವರೆಯುತ್ತಾನೆ.

ಕಾದಂಬರಿಯಲ್ಲಿ ರಾಜಮ್ಮನಿಗೆ ಸುಬ್ಬು ಮೋಸ ಮಾಡಿದ ಅನ್ನಿಸದರೂ, ರಾಜಮ್ಮನ ತ್ಯಾಗ ಎದ್ದು ನಿಲ್ಲುತ್ತದೆ. ಭೈರಪ್ಪನವರ ಕಾದಂಬರಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನ ಕೊಟ್ಟಿರುವುದನ್ನು ನಾವು ನೋಡಬಹುದು.
ಚಿ.ಸ.ನ.

Monday, January 19, 2009

ಕಾ :ಧರ್ಮರ್ಶಿ ಲೇ :ಭೈರಪ್ಪ ಅಂಕ :೩.೫/೫

ಇತ್ತೀಚಿಗೆ ಓದಿದ ಅತ್ಯುತ್ತಮ ಕಾದಂಬರಿಗಳಲ್ಲಿ ಇದು ಒಂದು. ಇತರೆ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅತ್ಯಾಚಾರ ದ ವಿರುದ್ದ ಧನಿ ಎತ್ತಿರುವ ಕಾದಂಬರಿಯಾಗಿದೆ. ತಲೆ ತಲಾಂತರದಿಂದ ಹಿಂದೂ ಧರ್ಮದ ಮೇಲೆ ಮತಾಂತರದ ಭೂತ ಕಾಡುತ್ತಿದೆ. ಹಿಂದೂ ಧರ್ಮದ ಕೆಲವು ನ್ಯೂನ್ಯತೆಗಳನ್ನು ವೈಭವಿಕರಿಸಿ, ಹಣದ ಆಮಿಷ ಒಡ್ಡಿ ಅಮಾಯಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವದು ಒಂದು ಕ್ರೌರ್ಯವೆ ಸರಿ.

ಧರ್ಮ ಮತ್ತು ಪ್ರೀತಿಯ ನಡುವಿನ ತೊಳಲಾಟದಲ್ಲಿ ಬಳಲುವ ನಾಯಕನ ಕತೆಯಿದು. ಈ ಕಾದಂಬರಿಯನ್ನು ಮೂರ ಭಾಗಗಳಾಗಿ ವಿಂಗಡಿಸಬಹುದು. ಪ್ರಥಮಾರ್ದದಲ್ಲಿ ಭೈರಪ್ಪನವರು ತಮ್ಮದೇ ಜೀವನದ ಕತೆಯನ್ನು ಇಲ್ಲಿ ಹೇಳಿದ್ದಾರೆ. ಸೋಮಾರಿ ತಂದೆ, ಅಕ್ಕ ಅಣ್ಣಂದಿರ ಅಕಾಲಿಕ ಮರಣ, ಮಾವನ ಮನೆಯಲ್ಲಿ ಪಟ್ಟ ಪಾಡು, ಓದಿಗಾಗಿ ಮೈಸೂರಿಗೆ ಸೇರಿದ್ದು ಹೀಗೆ......ತನ್ನ ವಿದ್ಯಾರ್ಥಿ ಜೀವನದಲ್ಲಿ ಶಂಕರ ಎಂಬ ಹಿಂದೂ ಧರ್ಮದ ಕಟ್ಟಾಳು ವಿನ ಪರಿಚಯವಾಗುತ್ತದೆ. ಸನಾತನವಾದ ಹಿಂದೂ ಧರ್ಮದ ಆಳ, ಚಿಂತನೆಗಳು, ಆಚರಣೆಗಳು, ಅದರಲ್ಲಿ ಅಡಗಿರುವ ಭಾವನೆಗಳು , ಮಹಾ ಪುರುಷರುಗಳು ಇತ್ಯಾದಿಗಳನ್ನು ತಿಳಿದು ರೋಮಂಚನಗೊಳ್ಳುತ್ತಾರೆ. ಶಂಕರ ತನ್ನ ಜೀವನವನ್ನು ಹಿಂದೂ ಧರ್ಮದ ಪ್ರಚಾರಕ್ಕಾಗಿ ಮುಡಿಪಾಗಿತ್ತಿರುವುದು, ಅವರ ಮನೆಯವರಿಂದ ಅದಕ್ಕೆ ಸಹಕಾರ ಇದರಿಂದ ಅತ್ಯಂತ ಪ್ರಭಾವಿಯಾಗಿರುತ್ತಾನೆ.
ಒಮ್ಮೆ ಕ್ರೈಸ್ತ ಪಾದ್ರಿ ಒಬ್ಬ ಹಣದ ಆಮಿಷ ಒಡ್ಡಿ ಬಡ ಹಿಂದೂ ಜನಗಳಿಗೆ ಮತಾಂತರ ಗೊಳಿಸಲು ಭಾಷಣ ಮಾಡುತ್ತಿದ್ದಾಗ ಸತ್ಯ ಸಿಡಿದಿದ್ದೆಳುತ್ತಾನೆ. ಹಿಂದೂ ವಿದ್ಯಾರ್ಥಿ ನಿಲಯಗಳಲ್ಲಿ ಹಸುವಿನ ಹಾಲಿನ ಬದಲು ಕ್ರೈಸ್ತರು ನೀಡುತ್ತಿದ್ದ ಡಬ್ಬದ ಹಾಲಿನ ವಿರುದ್ದ ನಿಲ್ಲುತ್ತಾರೆ.
ಹಿಂದೂ ಧರ್ಮದ ಆಚಾರ, ವಿಚಾರ, ಸಂಪ್ರದಾಯ, ಪದ್ಧತಿಗಳು, ಅದರಲ್ಲಿನ ಸತ್ವಗಳು ಹಿಂದೂ ಸ್ಮಾರಕಗಳು, ಇದರ ಉಳಿವೆಗಾಗಿ ತಮ್ಮ ಜೀವನ ಮುಡಿಪು ಎಂದು ಜೀವನ ಸಾಗಿಸುತ್ತ ಇರುತ್ತಾರೆ.

ಈ ನಡುವೆ ಸತ್ಯನಿಗೆ ರಾಚಮ್ಮ ಎಂಬ ಕ್ರೈಸ್ತ ಧರ್ಮದ ಮಹಿಳೆಯ ಪರಿಚಯವಾಗುತ್ತದೆ. ಆಕೆಯ ಸೇವಾ ಭಾವನೆ, ಪ್ರೀತಿ ವಿಶ್ವಾಸಗಳಿಗೆ ಧರ್ಮವನ್ನು ಮೀರಿ ಮಾರು ಹೋಗುತ್ತಾರೆ. ಧರ್ಮದ ದೃಷ್ಟಿಯಿಂದ ಆಕೆ ಇಂದ ದೂರ ಇದ್ದರು... ಸ್ನೇಹಿತನಾಗಿ ಹತ್ತಿರ ಇರಲು ಬಯಸುತ್ತಾರೆ.
ಇದು ದ್ವೀತಿಯಾರ್ದದಲ್ಲಿ ನಡೆಯುವ ಘಟನೆಗಳು. ಈ ನಡುವೆ ಬಡತನದ ಬೇಗೆ, ತಂಗಿಯ ಮಾಡುವೆ ಇತ್ಯಾದಿಗಳ ನಡುವೆ ರಾಚಮ್ಮನಿಂದ ದೂರ ಉಳಿಯುವ ಸಂಧರ್ಬ ಬರುತ್ತದೆ. ತನ್ನ ಆಪ್ತ ಮಿತ್ರನಿಗೆ ತಂಗಿಯನ್ನು ಕೊಟ್ಟು ಮಾಡುವೆ ಮಾಡಿದುದು ಒಂದು ಪ್ರಮುಕವಾದ ಘಟ್ಟ.


ಸತ್ಯ ಕಾಲೇಜು ಮೆಟ್ಟಿಲು ಹತ್ತುತ್ತಾನೆ. ತಾನು ಇಷ್ಟ ಪದದ ಅದ್ಯಪಕರ ಹೆಂಡತಿ 'ರಾಚಮ್ಮ' ಎಂದು ತಿಳಿದು ಆಶ್ಚರ್ಯ ಪಡುತ್ತಾರೆ. ಅದು ಅಲ್ಲದೆ ತಮ್ಮ ಸ್ನೇಹ ಮತ್ತೆ ಮುಂದೆ ವರೆಯುವುದು ಎಂದು ಸಂತೋಷ ಪಡುತ್ತಾರೆ.


ಈ ನಡುವೆ ರಾಚಮ್ಮನ ನಾದಿನಿ ಲಿಲ್ಲಿಯ ಪರಿಚಯವಾಗುತ್ತದೆ. ಈಕೆ ಪಕ್ಕ ಕ್ರೈಸ್ತರ ಹುಡುಗಿ. ಹಣೆಗೆ ಕುಂಕುಮ ಇಡೊಲ್ಲ, ತುಂಡು ಬಟ್ಟೆ, ತುಂಡು ಜಡೆ ಇತ್ಯಾದಿ.... ಹಿಂದೂ ಧರ್ಮದ ಆಚರ ವಿಚಾರಗಳನ್ನ ಗೇಲಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾಳೆ. ಹಿಂದೂ ಧರ್ಮದ ಮಹತ್ವವನ್ನು ತಿಳಿಸುವ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಸತ್ಯನಿಂದ ಪಡೆಯುತ್ತಾಳೆ. ಸತ್ಯನ ಜೊತೆಗಿನ ಮಾತು ಕತೆ, ಪುಸ್ತಕಗಳು ಅವಳಿಗೆ ಹಿಂದೂ ಧರ್ಮದ ಕಡೆಗೆ ಒಯ್ಯುತ್ತವೆ. ಸತ್ಯ ತಿಳಿದೋ ತಿಳಿಯದೆ ಲಿಲ್ಲಿ ಯನ್ನು ಪ್ರೀತಿಸ ತೊಡಗುತ್ತಾನೆ. ಆಕೆಯ ಸನಿಹ, ಪ್ರೀತಿಯ ಮಾತುಗಳು, ಸೇವಾ ಮಾನೋಭವ ಎಲ್ಲಕ್ಕೂ ಮಾರು ಹೋಗುತ್ತಾನೆ... ಈ ನಿರ್ವಿಕಾರ ಸಂಬಂದದ ನಡುವೆ ಧರ್ಮದ ಆಕಾರ ಬಂದು ನಿಲ್ಲುತ್ತಿರುತ್ತದೆ. ತನ್ನ ಭಾವನೊಡನೆ ತನ್ನ ಮತ್ತು ಲಿಲ್ಲಿಯ ಸಂಭಂದದ ಬಗ್ಗೆ ಚರ್ಚಿಸುತ್ತಾನೆ. ಆದರೆ ಮನೆಯವರಿಂದ ವಿರೋದವೇ ವ್ಯಕ್ತವಾಗುತ್ತದೆ.

ಮನೆಯವರ ವಿರೋದದ ನಡುವೆಯೂ ಲಿಲ್ಲಿಯನ್ನು ಮದುವೆಯಾಗಲು ಬಯಸುತ್ತಾರೆ. ಕ್ರೈಸ್ತರ ಹುಡುಗಿಯ ಮದುವೆಯಾಗಿ ಹಿಂದೂ ಧರ್ಮದ ಸಮಾಜದಲ್ಲಿ ಬದುಕುವುದು ಕಷ್ಟ ಎಂದೆನಿಸುತ್ತದೆ. ಪ್ರೀತಿಯ ಒತ್ತಡಕ್ಕೆ ಮಣಿದು ತಾನೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಲಿಲ್ಲಿಯನ್ನು ಮದುವೆಯಾಗುತ್ತಾರೆ. ಇದಕ್ಕೆ ಬಳುವಳಿಯಾಗಿ ಒಂದು ಕ್ರೈಸ್ತ ಶಾಲೆಯಲ್ಲಿ ಪ್ರಿನ್ಸಿಪಾಲ್ ಹುದ್ದೆ ಕೂಡ ಸಿಗುತ್ತದೆ.


ಪ್ರೀತಿಗೆ ಮಣಿದು ಧರ್ಮಕ್ಕೆ ಸೋತು ಜೀವನ ನಡೆಸುವುದು ಕಷ್ಟವಾಗುತ್ತದೆ. ಮನೆಯಲ್ಲಿ ಕ್ರಿಸ್ತನ ಅಂತಿಮ ಕ್ಷಣಗಳ ಚಿತ್ರಗಳು, ಎಲ್ಲೆಲ್ಲು ಶಿಳಬೆಗಳು... ತನ್ನ ಕೊರಳಲ್ಲೊಂದು ಹೀಗೆ.... ಶಾಲೆಯಲ್ಲಿ ಹಿಂದೂ ಧರ್ಮದವರಿಗೆ ಕೆಲಸವಿಲ್ಲ... ಇದ್ದರು ಮರ್ಯಾದೆ ಇಲ್ಲ... ಸತ್ಯನ ಹೆಸರು ಬಳಸಿ ಮತಾಂತರಕ್ಕೆ ಯತ್ನ... ಕ್ರೈಸ್ತರ ಡಬ್ಬದ ಹಾಲು... ಬೈಬಲ್ ಪುಸ್ತಕ ಮಕ್ಕಳ ಮೇಲೆ ಹೇರಿಕೆ...

ಇತ್ತ ಹಿಂದೂ ಸಮಾಜದಲ್ಲೂ ಸತ್ಯನಿಗೆ ಬದುಕಲು ಕಷ್ಟವಾಗುತ್ತದೆ. ಅನೇಕ ಯೋಚನೆ ಗಳು ಮನಸ್ಸಿಗೆ ಬಂದು ಮನಸ್ಸು ಗೋಜಲು ಮಾಯವಾಗುತ್ತದೆ. ಎರಡು ಸನ್ನಿವೇಶಗಳು ಸತ್ಯನನ್ನು ಖಿನ್ನತೆಗೆ ಒಳಪದಿಸುತ್ತವೆ.... ತನ್ನ ತಂದೆಯ ಶ್ರದ್ದ ಮಾಡಲು ತಮ್ಮ ಮನೆಯವರಿಂದಲೇ ಅವಕಾಶ ದೊರಕದಿರುವುದು.. ಹಾಗು ಬೇಲೂರಿಗೆ ಹೋದಾಗ ಮುಂದೆ ನಮ್ಮ ಮಕ್ಕಳು ಇದನ್ನು ನಮ್ಮದು ಎಂದು ಹೇಳಲು ಸಾದ್ಯವಿಲ್ಲ ವಲ್ಲ ಎಂದು ಮರುಗುತ್ತಾರೆ... ಸತ್ಯ ಯಾವ ಕೆಲಸದಲ್ಲೂ ಆಸಕ್ತಿ ವಹಿಸದೆ, ಖಿನ್ನತೆಯಿಂದ ಜೀವನ ಸಾಗಿಸುತ್ತ ಇರುತ್ತಾನೆ. ಲಿಲ್ಲಿಗೆ ಎಲ್ಲವು ಅರಥವಾದರು ಏನು ಮಾಡಲಾಗದೆ ಸತ್ಯನಿಗೆ ಹಿಂದೂ ಧರ್ಮದ ಸಹ ಧರ್ಮಿನಿಯ ರೀತಿ ಜೀವನ ಸಾಗಿಸುತ್ತ ಇರುತ್ತಾಳೆ.
ಒಮ್ಮೆ ಸತ್ಯ ಶಂಕರನನ್ನು ಬೇಟಿ ಮಾಡಿ ತನ್ನ ಮನಸ್ಸಿನ ತೊಳಲಾಟವನ್ನು ಅವನಿಗೆ ತಿಳಿಸುತ್ತಾನೆ. ಶಂಕರ ಸತ್ಯನ ಮನಸಿತಿತಿ ಚೆನ್ನಾಗಿ ಗೊತ್ತಿರುತ್ತದೆ. ಶಂಕರ ಸತ್ಯ ಹಾಗು ಲಿಲ್ಲಿಯನ್ನು ಆರ್ಯ ಸಮಾಜದ ವಿಧಿ ವಿಧಾನಗಳಿಂದ ಹಿಂದೂ ಧರ್ಮಕ್ಕೆ ಸೇರಿಸಿಕೊಲ್ಲುತ್ತಾನೆ.......
ಆಗ ಲಿಲ್ಲಿ ಧರ್ಮರ್ಷಿ ಆಗುತ್ತಲೇ.....
ಭೈರಪ್ಪನವರು ಧರ್ಮ ಮತ್ತು ಪ್ರೀತಿಯ ನಡುವಿನ ತೊಳಲಾಟ... ಮತಾತರದಂತ ಸ್ಮೂಕ್ಷ್ಮ ವಿಚಾರಗಳನ್ನ ಚೆನ್ನಾಗಿ ವಿಮರ್ಶಿಸಿದ್ದಾರೆ..... ಎಲ್ಲರು ಒಮ್ಮ ಓದಲೇ ಬೇಕಾದ ಪುಸ್ತಕ ಇದು...
ಚಿ.ಸ.ನ

Monday, December 8, 2008

ಕಾ-ಮೂಕಜ್ಜಿಯ ಕನಸುಗಳು, ಲೇ-ಶಿವರಾಮ ಕಾರಂತ್, ಅಂ- ೪/೫

ಮೂಕಜ್ಜಿಯ ಕನಸುಗಳು ಒಂದು ಸುಲಭದ ಕಾದಂಬರಿಯಲ್ಲ. ಒಮ್ಮೆ ಓದಲು ಕುಳಿತು, ಪುಸ್ತಕ ಮಡಿಚಿಟ್ಟಿದ್ದು ಉಂಟು. ಯಾಕೆ ಹೀಗಿದೆ? ಒಂದಕ್ಕೊಂದು ಸಂಬಂಧವಿಲ್ಲ. ಒಂದೇ ತೆರೆನಾದ ಕತೆಯು ಇಲ್ಲ. ಇದು ಓದುಗರನ್ನು ಎತ್ತ ಕೊಂಡೊಯ್ಯುತ್ತಿದೆ? ಹೀಗೆ ಅನೇಕ ಪ್ರಶ್ನೆಗಳು ನನ್ನಲ್ಲಿ ಮೂಡಿದವು.

ಅದೇಕೋ ಏನೋ ಇತ್ತೀಚಿಗೆ ಮತ್ತೊಮ್ಮೆ ಓದುವ ಹಂಬಲ ಹೆಚ್ಚಾಯಿತು. ಆದರೆ ಈಬಾರಿ ನಾನು ಓದುವ ಮಾರ್ಗವನ್ನು ಅರಿತಿದ್ದೆ. ಇದನ್ನು ಕತೆ/ಕಾದಂಬರಿ ರೀತಿ ಓದಿದರೆ ಖಂಡಿತ ಅರ್ಥವಾಗದು ಎಂಬುದು ಅರಿತೆ. ಇದೊಂದು ವಿಮರ್ಶಾ ಗ್ರಂಥ.

ಈ ಗ್ರಂಥದ ಒಂದೊಂದು ಭಾಗವು ಅಮೂಲ್ಯವಾದುದು. ಮೂಕಜ್ಜಿಗೆ ಕನಸು ಬೀಳುತ್ತೆ, ಅದರಲ್ಲಿ ಯಾರ್ಯಾರೋ ಕಾಣಿಸ್ತಾರೆ, ಹೀಗೆಲ್ಲ ಯೋಚನೆ ಮಾಡಿದರೆ ಬಹುಷಃ ಕತೆಯೇ ಮುಂದುವರೆಯುವುದಿಲ್ಲ.

ನಮ್ಮ ಜೀವನದ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದಾರೆ ಲೇಖಕರು. ನಮ್ಮ ಪದ್ಧತಿಗಳು, ಆಚಾರ, ವಿಚಾರ, ಜೀವನ ಶೈಲಿ, ಮೂಡ ನಂಬಿಕೆಗಳು.. ಇದನ್ನೆಲ್ಲಾ ಯೋಚಿಸುತ್ತಿದ್ದರೆ ಜೀವನದಲ್ಲಿ ಜಿಜ್ಞಾಸೆ ಮೂಡುವುದು ಖಚಿತ. ಜೀವನದ ಅರ್ಥವನ್ನು ಹುಡುಕಲು ಹೊರಟಿದ್ದಾರೆ. ಲೇಖಕರ ಪ್ರಶ್ನೆಗಳು ಹಲವು ಭಾರಿ ನಮ್ಮನ್ನು ಕಾಡಿದ್ದುಂಟು. ಉತ್ತರ ಸಿಗದೇ, ಚರ್ಚಿಸದೆ ಸುಮ್ಮನಿದ್ದೇವೆ ಅಷ್ಟೆ.


ರಣರಂಗದಲ್ಲಿ ಶ್ರೀಕೃಷ್ಣನು ಮೂರು ದಿನಗಳವರೆಗೆ ಉಪದೇಶ ಮಾಡುತ್ತಿದ್ದರೂ ಕೌರವರು ಏನು ಮಾಡುತ್ತಿದ್ದರು?

ರಾವಣನನ್ನು ಹುಟ್ಟಿಸಿ, ರಾಮನು ಭೂಮಿಯಲ್ಲಿ ಜನಿಸುತ್ತಾನೆ. ರಾಮನೇ ಶಿವ ಧನಸ್ಸನ್ನು ಮುರಿಯಬೇಕು. ಯಾಕೆಂದರೆ ಲಕ್ಷ್ಮಿ ಅಂದರೆ ಸೀತೆಯನ್ನು ಬೇರೆ ಯಾರು ವರಿಸೋಕೆ ಆಗೋಲ್ಲ ಅಲ್ಲವೇ ? ಸೀತಾ ಪರಿಣಯದ ಅವಶ್ಯ ಕಥೆ ಇತ್ತ?

ದುಷ್ಟರನ್ನು ಹುಟ್ಟಿಸುವುದೇಕೆ ಹಾಗು ಕೊಲ್ಲುವುದೇಕೆ ? ಪ್ರಪಂಚದಲ್ಲಿ ಎಲ್ಲರು ಒಳ್ಳೆಯವರು ಯಾಕಾಗಬಾರದು?
ದಾಸರು ಹೆಂಡತಿಯನ್ನು ಬಿಟ್ಟು ದೇವರ ಸ್ಮರಣೆಯಲ್ಲಿ ಕಾಲ ಹಾಕಿದರೆ ಯಾವ ಕರ್ಮಕ್ಕಾಗಿ ಮದುವೆಯಾಗಬೇಕಿತ್ತು?

ಮನುಷ್ಯರೆಲ್ಲರೂ ನಿರ್ವಸ್ತ್ರದಾರಾಗಿದ್ದರೆ ನಾಚಿಕೆ /ದೈಹಿಕ ಆಕರ್ಷಣೆಯ ಅರ್ಥ ಬೇರೆ ಆಗುತ್ತಿತ್ತಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಲೇಖಕರಿಗೆ ಉದ್ಬವಿಸುತ್ತದೆ.


ನಮ್ಮ ಪುರಾತನ ಯುಗದ ಅಸ್ತಿತ್ವ, ದಾಳಿಗೊಳಗಾದ ದೇವಸ್ತಾನಗಳು. ಒಂದು ಧರ್ಮದಿಂದ ಮತ್ತೊಂದು ಧರ್ಮದ ತುಳಿತ... ಕಣ್ಮರೆಯಾದ ಅನೇಕ ಸ್ಮಾರಕಗಳು... ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಇಡಿ ಕತೆಯು ಸುಬ್ಬಣ್ಣ ಮತ್ತು ಮೂಕಜ್ಜಿಯ ನಡುವಿನ ಸಂಭಾಷಣೆಯಲ್ಲಿ ಕಾಣುತ್ತೇವೆ. ಜೀವನದ ಸತ್ಯಾಸತ್ಯತೆ ಅರಿಯಲು ಲೇಖಕರು ಮೂಕಜ್ಜಿಯ ಸಹಾಯ ಪಡೆದಿದ್ದಾರೆ ಹಾಗು ತಮ್ಮ ಮಂಡನೆಯನ್ನು ಮೂಕಜ್ಜಿಯ ಮುಖಾಂತರ ಮಂಡಿಸಿದ್ದಾರೆ.

ಇದೊಂದು ಅದ್ಬುತ ಗ್ರಂಥ. ಎಲ್ಲರು ಕೊಂಡು ಓದಬೇಕಾದ ಒಂದು ಪುಸ್ತಕ.

ಚಿ.ಸ.ನ.

Sunday, December 7, 2008

ಕಾ- ರೂಪದರ್ಶಿ- ಕ.ವಿ.ಐಯರ್- ಅಂ - ೩/೫

ಬೀಚಿ ಈ ಕಾದಂಬರಿ ಓದಿ ಕಣ್ಣೀರು ಸುರಿಸಿದ್ದರಂತೆ. ಬೀಚಿ ಅವರ "ನನ್ನ ಬಯಾಗ್ರಫಿ" ಓದಿದ ಮೇಲೆ ನನಗೆ ಈ ಪುಸ್ತಕ ಓದಬೇಕೆಂಬ ಹಂಬಲ ಹೆಚ್ಚಾಯಿತು.

ಏಸುವಿನ ಜೀವಿತವನ್ನು ಚಿತ್ರಿಸಲು ಹೊರಟ ಕಲಾವಿದ ಮೈಕಲ್ ಕಂಡದ್ದು ಅರ್ನೆಸ್ಟ್ ಎಂಬ ಅನಾಥ ಬಾಲಕನನ್ನು. ಆತನ ಮುಗ್ದತೆಯನ್ನು ಕಂಡು ಅವನನ್ನು ಏಸುವಿನ ಬಾಲ ದಿನಗಳನ್ನು ಚಿತ್ರಿಸಲು ಅವನನ್ನು ರೂಪದರ್ಶಿಯಾಗಿ ಫ್ಲೋರೆನ್ಸೆ ನಗರಕ್ಕೆ ಕರೆ ತರುತ್ತಾನೆ. ಅರ್ನೆಸ್ಟ್ ನ ಅಜ್ಜಿಗೆ ಸಾಕಷ್ಟು ಹಣ ಕೊಟ್ಟು ಏಸುವಿನ ಬಾಲ್ಯ ಜೀವನದ ಚಿತ್ರಗಳನ್ನು ಬಿಡಿಸುತ್ತಾನೆ.

ಕಡು ಬಡ ಕುಟುಂಬದ ಅರ್ನೆಸ್ಟ್ ಈ ಕೆಲಸದಿಂದ ಸ್ವಲ್ಪ ಹಣ ಗಳಿಸಿ ತನ್ನ ಅಜ್ಜಿಯೊಂದಿಗೆ ಹಿಂದಿರುಗುತ್ತಾನೆ. ಅಲ್ಲಿಂದ ಮುಂದಿನ ಅರ್ನೆಸ್ಟ್ ಜೀವನದ ಹಾಡಿ ಕರಳವಾಗಿರುತದೆ. ಇತ್ತ ಮೈಕಲ್ ಕಾರಣಾಂತರಗಳಿಂದ ಚರ್ಚ್ ನ ಕೆಲಸ ಮದ್ಯದಲ್ಲೇ ನಿಲ್ಲುತ್ತದೆ. ಇದರಲ್ಲೇ ೨೦-೨೫ ವರ್ಷಗಳು ಕಳೆದು ಹೋಗುತ್ತದೆ.
ಎಸುವಿನೊಡನೆ ಸ್ನೇಹಿತನ ರೀತಿ ಇದ್ದು ಏಸುವಿಗೆ ದ್ರೋಹ ಬಗೆಯುವ "ಜುದಾಸನ" ಚಿತ್ರಕ್ಕೆ ಒಬ್ಬ ರೂಪದರ್ಶಿಯನ್ನು ಹುಡುಕುತ್ತ ಮೈಕಲ್ ಒಬ್ಬ ಕುರೂಪಿ, ಕಳ್ಳ ನನ್ನು ಒಪ್ಪಿಸಿ ಕರೆತರುತ್ತಾನೆ... ಈತ ಒಬ್ಬ ಅತ್ಯಂತ ಕುರೂಪಿ ಆಗಿದ್ದು, ಒಂದು ಕಣ್ಣು ಇಲ್ಲದೆ... ಜನರನ್ನು ಲೂಟಿ ಮಾಡಿ ಜೀವನ ಸಾಗಿಸುತ್ತಿರುತ್ತಾನೆ.

ಈತನನ್ನು ಬಲವಂತವಾಗಿ ರೂಪದರ್ಶಿಯ ಕಾರ್ಯಕ್ಕೆ ಕರೆತಂದಾಗ... ಈತನಿಗೆ ತನ್ನ ಹಿಂದಿನದೆಲ್ಲ ನೆನಪಿಗೆ ಬರುತ್ತದೆ... ಆತನೇ ತನ್ನ ಮುದ್ದಿನ ಅರ್ನೆಸ್ಟ್ ಅಂದು ಕೇಳಿ ಮೈಕಲ್ ಮಮ್ಮಲ ಮರುಗುತ್ತಾನೆ... ಅರ್ನೆಸ್ಟ್ ನ ಜೀವನ ಚರಿತ್ರೆಯನ್ನು ಹೃದಯ ವಿದ್ರಾವಕವಾಗಿ ಇಲ್ಲಿ ಚಿತ್ರಿಸಿಲಾಗಿಧೆ..... ಪ್ರೀತಿ, ವಿಶ್ವಾಸ, ಅಂತಃಕರಣ, ಭಾವೊದ್ವೆಗಗಳು ಎಲ್ಲವನ್ನು ಐಯರ್ ರವರು ಅಚ್ಚುಕಟ್ಟಾಗಿ ಸೃಷ್ಟಿಸಿದ್ದಾರೆ.

ಇದೊಂದು ದುಷ್ಟಾಂತದ ಕಥೆ. ಎಷ್ಟೋ ಸಂದರ್ಬ ಕಣ್ತುಂಬಿ ಬರುತ್ತದೆ. ತಾಯಿಯ ಮಮಕಾರ, ತಂಗಿಯ ಅಕ್ಕರೆ, ಪ್ರೆಯಶಿಯ ಪ್ರೀತಿ ಎಲ್ಲವು ಅಚ್ಚುಕಟ್ಟಾಗಿ ಮೂಡಿ ಬಂದಿದೆ...

ಲೆನೋವೋಳ ಸೌಂದರ್ಯವನ್ನು ವರ್ಣಿಸಿರುವ ರೀತಿಯಂತೂ ವರ್ಣಿಸಲಾಗದು......

ಆದರೆ ಈ ಕಥೆಯನ್ನು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿ ಹೇಳಿರುವುದು ಸ್ವಲ್ಪ ಬೇಸರ ತರುತ್ತದೆ... ಇರೋಪ್ಯ ರಾಷ್ಟ್ರಗಳ ಜನ ಜೀವನ,ಸಂಸ್ಕೃತಿ ಯಾವುದು ಭಾರತೀಯರ ರೀತಿ ಇಲ್ಲ.... ಇಲ್ಲಿ ಬರುವ ಎಲ್ಲ ಪಾತ್ರಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ.

ಈ ಒಂದು ವಿಷಯ ಬಿಟ್ಟರೆ... ಒಂದು ಬಾರಿ ಓದಲೇ ಬೇಕಾದ ಕಾದಂಬರಿ ಇದು...

ಲೆನೋವೋಳ ಸೌಂದರ್ಯವನ್ನು ವರ್ಣಿಸಿರುವ ರೀತಿಯನ್ನು ನೋಡಿದರೆ... ಅವರ "ಶಾಂತಲ" ಕಾದಂಬರಿಯನ್ನು ಓದಲೇ ಬೇಕೆಂದು ಮನಸ್ಸಾಗುತ್ತದೆ...

ಚಿ.ಸ.ನ.

ಕಾ- ಕಾಮಿನಿ ಕಾಂಚನ - ಲೇ- ಆ.ನ.ಕೃ - ಅಂ - ೧/೫

ನನ್ನ ಸಲಹೆ ಕೇಳಿದರೆ ಇದನ್ನು ಓದುವ ಅಗತ್ಯ ಇಲ್ಲ ಅನ್ನಿಸುತ್ತೆ.
ಏನಿದೆ ಅಂಥ ಓದಬೇಕಾಗಿದೆ....
ಲಕ್ಷ್ಮಯ್ಯ ಹೆಣ್ಣು , ಹೊನ್ನಿನ ಆಸೆಗೆ ಬಿದ್ದು ತನ್ನ ಜೀವನ ಹಾಳು ಮಾಡಿ ಕೊಳ್ಳುವ ಕಥೆಯನ್ನು ೨೧೬ ಪುಟಗಳಲ್ಲಿ ಓದಬೇಕೆ?? ಅದು ಒಂದು ರೀತಿಯಲ್ಲಿ ಇದು ಅಪೂರ್ಣ ಕಥಾನಕವೇ ... ಅಥವಾ... ಲಕ್ಷ್ಮಯ್ಯ್ಯನ ಜೀವನ ಕವಲು ಒಡೆದ ದಾರಿಯಲ್ಲಿ ನಿಂತಿದೆ ಎಂದು ಕಥೆ ಮುಗಿಯಿತೆ...
ಲಕ್ಷ್ಮಯ್ಯ್ಯನ ಜೀವನ "ಜ್ವಾಲ" ಎಂಬ ವ್ಯಭಿಚಾರಿ ಹೆಣ್ಣಿನಿಂದ ಹಾಳಾಗುವ ಕಥೆ ಇದು. ಜೊತೆಗೆ ಕೆಟ್ಟ ಸಹವಾಸ ಬೇರೆ ಮಾಡಿ ಲಕ್ಷ್ಮಯ್ಯ್ಯ ಅಡ್ಡ ದಾರಿ ಹಿಡಿದಿದ್ದ....

೫೦ ರ ದಶಕದಲ್ಲಿ ವ್ಯಭಿಚಾರಿ ಹೆಣ್ಣು ಮದ್ಯಪಾನ ಹಾಗು ಧೂಮ ಪಾನ ವ್ಯಸನಿ ಅಂದರೆ ನಂಬುವುದು ಕಷ್ಟದ ಸಂಗತಿಯೇ... ಒಂದು ವಠಾರದ ಜೀವನ, ದ್ವೇಷ ಅಸೂಯೆಯ ನಡುವೆ ಜೀವನ... ಕೆಟ್ಟು ಪಟ್ಟಣಕ್ಕೆ ಬಂದರು ಅನ್ನೋ ಹಾಗೆ ರಂಗಯ್ಯ ಬೆಂಗಳೂರಿಗೆ ಬಂದು ನೆಲಸುವುದು.. ಎಲ್ಲ ಚೆನ್ನಾಗಿ ಬಿಂಬಿತವಾಗಿದೆ ಬಹುಷಃ ಈ ಕಥೆ ೫೦ ರ ದಶಕಕ್ಕೆ ಸರಿ ಹೊಂದುತ್ತಿತ್ತೋ ಏನೋ...

ಹಾಳಾಗುವ ವಿಧಾನಗಳು ಈಗ ಬೇಕಾದಷ್ಟಿದೆ :)

ಚಿ.ಸ.ನ.

Thursday, August 7, 2008

ಭಾವನೆಗಳ ಸುತ್ತ...

ಭಾವನೆಗಳ ಸುತ್ತ...

ಭಾವನೆ ಎಂದರೆ ಏನು ಎಂದು ಆ ಪುಟ್ಟ ಹುಡುಗಿ ಕೇಳಿದಾಗ ನನಗೂ ಒಂದು ಕ್ಷಣಕ್ಕೆ ಉತ್ತರಿಸೋದು ಸ್ವಲ್ಪ ಕಷ್ಟದ ಕೆಲಸಾನೇ ಆಗಿತ್ತು. ಉತ್ತರ ಹುಡುಕಲು ಹೊರಟಾಗ ನಾ ಸಿಲುಕಿದ್ದು ಭಾವನೆಗಳ ಸುಳಿಯಲ್ಲಿ.

ಭಾವ ಒಂದು ಮನಸ್ಸಿನ ಸ್ಥಿತಿ. ಅದು ಪ್ರೀತಿ, ನೋವು, ಸಿಟ್ಟು, ಸಂತಸ, ಹುಡುಗಾಟ, ನಿರಾಶೆ, ಅತೃಪ್ತಿ ಯಾವುದಾದರು ಆಗಿರಬಹುದು. ಮನಸ್ಸಿನ ಸ್ಥಿತಿಯನ್ನು ಹೊರಹಾಕಿದ ಸೊಲ್ಲುಗಳೇ ಭಾವ ಗೀತೆಗಳಾದವೇನೋ ... ಸಂಬಂಧಗಳನ್ನು ಬೆಸೆದಿರುವುದು ಈ ಭಾವಗಳೇ ಅಲ್ಲವೇ? ಎಂದೋ ಆಡಿ, ಯಾರನ್ನೋ ಪ್ರೀತಿಸಿ, ನೋವು ನಲಿವಿನಲಿ ಭಾಗಿಯಾಗಿ, ಹುಡುಗಾಟದಿ ಮಿಂಚಿ, ನಿರಾಶೆಯಲಿ ಮಾಸಿ ಕಡೆಗೊಂದು ದಿನ ಈತ ನನ್ನ ಆಪ್ತ ಗೆಳೆಯ, ಆಕೆ ನನ್ನ ಪ್ರೀತಿಯ ಗೆಳತಿ, ಆಪ್ತ ಮಡದಿ, ನಮ್ಮ ಆಪ್ತರು.. ಎಂದೆಲ್ಲ ಹೇಳುವುದಿಲ್ಲವೇ?? ಹಾಗಾದರೆ ಸಂಬಂಧಗಳನ್ನು ಗಟ್ಟಿ ಮಾಡುವುದು ಈ ನಮ್ಮ ಭಾವಗಳೇ...

ಇನ್ನು ಭಾವನೆ? ನಮ್ಮ ಭಾವಗಳಿಂದ ಮೂಡಿದ ಊಹೆ ಅಥವಾ ಅಭಿಪ್ರಾಯವೇ ಭಾವನೆ ಅಲ್ಲವೇ?.

ಹಾಗಾದರೆ ಯಾರು ಈ ಭಾವುಕ ಜೀವಿ? ನಗುವಾಗ ನಕ್ಕು, ಅಳುವಾಗ ಅತ್ತು, ಹುಡುಗಾಟದಿ ಬೆರೆತು, ಭಾವಗಳಿಗೆ ಸ್ಪಂದಿಸುವ ವ್ಯಕ್ತಿಯೇ ಈ ಭಾವುಕ ಜೀವಿಯೇ?? ಆದರೆ ಮನಸ್ಸು ಬುದ್ಧಿಗೆ ನಿಲುಕಿದ್ದು ಭಾವನೆಯೇ? ಮನಸ್ಸು ನಿಲುಕಿದ ಭಾವನೆ ಅರ್ಥ ಕಳೆದು ಕೊಳ್ಳುವುದಿಲ್ಲವೇ?.ಮನಸ್ಸು ಬುದ್ಧಿಗಳನ್ನು ಮೀರಿ ಸ್ವಯಂ ಪ್ರೇರೇಪಿತವಾಗಿ, ಸ್ವಯಂ ಘೋಷಿತವಾಗಿ ಮೂಡುವ ಮನಸ್ಸಿನ ಪ್ರಾಕಾರಗಳೇ ಭಾವನೆಗಳು ಎಂದು ಅರ್ಥೈಸಬಹುದಲ್ಲವೇ? ಆತನೇ ಭಾವುಕ ಜೀವಿ ಅಲ್ಲವೇ?. ಹಾಗಾದರೆ ನಾವು ಭಾವನೆಯನ್ನು ವಿಂಗಡಿಸಿ ಸದ್ಭಾವನೆ ಎನ್ನುವುದು ಸರಿಯೇ? ಅಥವಾ, ಭಾವಗಳನ್ನು ಮಂಡಿಸುವುದು ಮನಸ್ಸು ಬುದ್ಧಿಯ ಕೆಲಸ ಎಂದು ಒಪ್ಪಿಕೊಳ್ಳಬೇಕೇ? ಇದರಿಂದ ಭಾವನೆಗಳಲ್ಲಿ ಭೇಧ ಉಂಟಾಯಿತೇ? ಸಮಯಕ್ಕೆ ಸರಿಯಾಗಿ, ಯಾರಿಗೂ ನೋವುಂಟು ಮಾಡದೆ, ಪರಿಸ್ಥಿತಿಯನ್ನು ಅವಲೋಕಿಸಿ, ಕೆಡಕು ಬಯಸದೆ ವ್ಯಕ್ತ ಪಡಿಸಿದ ಭಾವನೆಯೇ ಸದ್ಭಾವನೆಯಾಗಿರಬೇಕು ಮತ್ತೊಂದು ವಿರುದ್ಧಾರ್ಥವಾಗಿರಬೇಕು. ಹಾಗಾದರೆ ಭಾವುಕ ಜೀವಿಗಳೆಲ್ಲಾ ಸಧ್ಭಾವನೆ ಹೊಂದಿರಬೇಕಿಲ್ಲ ಅಲ್ಲವೇ?

ಒಂದು ಮಗುವಿಗೆ ಸಧ್ಭಾವನೆಯ ಅರ್ಥ ತಿಳಿಸುವುದು ಹೇಗೆ? ಆಗ ಹೇಗೋ ಜಾರಿಕೊಂಡ ನಾನು ಸಿಲುಕಿದ್ದೆ ಭಾವನೆಗಳ ಸುಳಿಯಲ್ಲಿ.


ಚಿ.ಸ.ನ.

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...