Thursday, May 28, 2020

ನೀರೆ

ನೀರೆ

ಸೆರಗು ಬೀಸುತ ನಾಚಿ
ಮೇಲ್ಚಾವಣಿಯಲಿ ನೀರೆ
ಶ್ವೇತ ಸುಂದರಿ ಈಕೆ
ಕಾಣ ಬಯಸುವೆ ಮತ್ತೆ

ಕಾಫಿ ಕುಡಿಯುವ ಹೊತ್ತು
ಜೊತೆಗಿವಳ ಗಮ್ಮತ್ತು
ಬಯಸದೆ ಬಂದಿಳಿದೆ
ಮುದ ನೀಡಿ ನೀ ಮನಕೆ

ಹೊರಟೆ ಎಲ್ಲಿಗೆ ಏಕೆ
ಉಳಿಯ ಬಾರದೆ ಇಲ್ಲೇ
ಸಂಜೆ ಸಂಭ್ರಮ ಸೇರಿ
ಹೊತ್ತು ಕಳೆಯುವ ಮತ್ತೆ

ಕೆಂಪು ಕಪ್ಪಿಟ್ಟ ನಿಶೆ
ನೀ ನಿನ್ನ ಮನೆಯೊಳಗೆ
ಮತ್ತೆ ಕಾಯುವೆ ನಿನಗೆ
ತೆರೆದ ಕಿಟಕಿಯಲೊಮ್ಮೆ

ನರಸಿಂಹ ಪ್ರಸನ್ನ

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...