Monday, February 10, 2020

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ
ನೀ ಕೊಟ್ಟ ಪ್ರೀತಿ ಹಂಚಿದೆಯೇನೋ ಅನಿಸುತ್ತಿದೆ...
ನಿನ್ನೊಡನೆಯ ಸಾಗರ ತೀರ, ತನ್ಮತೆಯ ಅತಿಸಾರ
ಸರ್ವ ಖುಷಿಯು ನಂದೆಂದು ಬೆನ್ನು ತಟ್ಟಿದ್ದೆ

ವಾರೆ ನೋಟಕೆ ಬಲಿಯಾದೆ ನಾನಂದು
ಇವಳ ನಾಚಿಕೆಯ ಹುಚ್ಚು ಮರಳಲ್ಲಿ ಗೀಚಿತ್ತು..
ಮರಳಿಗೆ ಸ್ಪರ್ಶವೋ, ಸುಖವೊ ಎರಡೂ ಸಿಕ್ಕಿತ್ತು

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಮರಳ ದಂಡೆಯಲಿ ನಾವಿಬ್ಬರೇ, ಏನೋ
ಹೊಸ ಮುಜುಗರ, ಬಲು ಸಡಗರ
ಮುಳುಗಲೊಲ್ಲದ ಸೂರ್ಯ, ನನ್ನಾಕೆಯ ರಮಿಸಿ ಕೆಂಪೇರಿದ್ದ

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಸ್ಪರ್ಶಕ್ಕೆ ಸೋತಿತ್ತು ಮನಸೆರಡು, ನೆಟ್ಟಿತ್ತು ಮೈಮನ ಹಾಯಿ ದೋಣಿಯ ಕಡೆಗೆ....
ತಂಪಾದ ತಿಳಿಗಾಳಿ ಮುತ್ತಿಟ್ಟು ಈಕೆಗೆ....
ಹಾಯ್ದು ಹೋಗಿತ್ತು ಹಾಗೆ ಸುಮ್ಮನೆ...

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಪಾದ ತೊಳೆದು ಗುರುತನಳಿಸಿ, ಕರೆ ಕೊಟ್ಟಿತು ಸಾಗರ
ಮನೆಯ ದಾರಿ ಹಿಡಿದ ನಮಗೆ, ಸಂಜೆ ಬರುವ ಕಾತುರ
ನೀವಳಿಸಿ ದೃಷ್ಟಿ ತೆಗೆದು ಮಿಂಚು ಮೆಚ್ಚಿ ನಕ್ಕಿತು

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ನರಸಿಂಹ ಪ್ರಸನ್ನ

No comments:

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...