ಸುಪ್ರಭಾತ
ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು
ಚಂದ ಮಾಮನು ಮನೆಗೆ ಹೊರಟಾಯಿತು.
ಮೂಢಣದಿ ಕಿರಣಗಳು ಮನೆ ಸೇರಿತು
ಚುಕ್ಕಿ ಬಾನಲಿ ಕೂಡ ಮರೆಯಾಯಿತು
ಪಕ್ಷಿ ಸಂಕುಲ ಎದ್ದು ಹಾರಾಡಿತು
ಗಂಟೆ ನಾದದಿ ಗುಡಿಯು ತೆರೆದಾಯಿತು
ವೇದ ಘೋಷದಿ ದಿನವು ಶುರುವಾಯಿತು
ಮಂಜು ಎಲೆಗಳ ಮೇಲೆ ನಲಿದಾಡಿತು
ಮನೆಯ ಮುಂದಿನ ರಂಗೋಲಿ ಕುಣಿದಾಡಿತು.
ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು
ಚಿ.ಸ.ನ
Saturday, April 25, 2009
Tuesday, April 7, 2009
ರವಿಯು ಎಲ್ಲಿಗೆ ಹೋದನು?
ರವಿಯು ಎಲ್ಲಿಗೆ ಹೋದನು?
ಚೌಕಕ್ಕೆ ಭಾರಕ್ಕೆ ಸೋತಿತ್ತು ನನ್ನ ಮನ
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ
ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ
ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ
ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".
ಚಿ.ಸ.ನ.
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ
ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ
ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ
ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".
ಚಿ.ಸ.ನ.
Saturday, April 4, 2009
ಪುಂಡನ ಏರೋಪ್ಲೇನು
ಪುಂಡನ ಏರೋಪ್ಲೇನು
ಡೊಳ್ಳು ಹೊಟ್ಟೆಯ
ಉದ್ದನೆ ಮೂತಿಯ
ಕೆಂಪನೆ ಬತ್ತಿಯ
ನಾಲ್ಕು ಚಕ್ರದ ಗಾಡಿ
ಎನಿದು ಗೊತ್ತೇನು
ಪುಂಡನ ಏರೋಪ್ಲೇನು
ಪುಂಡನು ನೂಕುತ
ಪುಂಡನು ಆಡುತ
ಪುಂಡನು ಒದೆಯುತ
ಪುಂಡನು ಎಸೆಯುತ
ಎನಿದು ಗೊತ್ತೇನು
ಪುಂಡನ ಏರೋಪ್ಲೇನು
ಎಡಗೈಲಿ ಮೂತಿ
ಬಲಗೈಲಿ ಹೊಟ್ಟೆ
ತಲೆಮೇಲೆ ಚಕ್ರ
ಚೂರ್ ಚೂರ್ ಕೆಂಪನೆ ಬತ್ತಿ
ಎನಿದು ಗೊತ್ತೇನು
ಪುಂಡನ ಏರೋಪ್ಲೇನು
- ಚಿ.ಸ.ನ
ಡೊಳ್ಳು ಹೊಟ್ಟೆಯ
ಉದ್ದನೆ ಮೂತಿಯ
ಕೆಂಪನೆ ಬತ್ತಿಯ
ನಾಲ್ಕು ಚಕ್ರದ ಗಾಡಿ
ಎನಿದು ಗೊತ್ತೇನು
ಪುಂಡನ ಏರೋಪ್ಲೇನು
ಪುಂಡನು ನೂಕುತ
ಪುಂಡನು ಆಡುತ
ಪುಂಡನು ಒದೆಯುತ
ಪುಂಡನು ಎಸೆಯುತ
ಎನಿದು ಗೊತ್ತೇನು
ಪುಂಡನ ಏರೋಪ್ಲೇನು
ಎಡಗೈಲಿ ಮೂತಿ
ಬಲಗೈಲಿ ಹೊಟ್ಟೆ
ತಲೆಮೇಲೆ ಚಕ್ರ
ಚೂರ್ ಚೂರ್ ಕೆಂಪನೆ ಬತ್ತಿ
ಎನಿದು ಗೊತ್ತೇನು
ಪುಂಡನ ಏರೋಪ್ಲೇನು
- ಚಿ.ಸ.ನ
Subscribe to:
Posts (Atom)
ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )
ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...
-
ರೋಸೆವಿಲೆನಲ್ಲಿ ಉಪಾಕರ್ಮ... ಅಲಾರಂ ಗಡಿಯಾರ ಬೆಳಿಗ್ಗೆ ೫ ಗಂಟೆಗೆ ಹೊಡೆದು ಕೊಳ್ಳುತ್ತಾ ಇತ್ತು. ಎದ್ದು ತಲೆ ಮೇಲೆ ಮಟೊವರೆಗೂ ಸುಮ್ಮನೆ ಇರಲಿಲ್ಲ. ಕಡೆಗೂ ತಲೆ ಮೇಲೆ ಮಟ್...
-
ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ.... ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ ನೀ ಕೊಟ್ಟ ಪ್ರೀತಿ ಹಂಚಿದೆಯೇನೋ ಅನಿಸುತ್ತಿದೆ... ನಿನ್ನೊಡನೆಯ ಸಾಗರ ತೀರ, ತನ್ಮತೆಯ ...
-
ಆ ನಾಲ್ಕು ಜನ... ಆ ನಾಲ್ಕು ಜನ ಪುಂಡು ಹುಡುಗರೇ... ಒಬ್ಬಬ್ಬರಿಗೆ ಒಂದೊಂದು ಅಡ್ಡ ಹೆಸರುಗಳು....ಎಲ್ಲರು ಪ್ರಾಯಕ್ಕೆ ಬಂದಿರೋರೆ..... ಮೊದಲನೆಯವನು ಕರಿಯ, ದಪ್ಪಗೆ, ಕಪ್...