Monday, December 8, 2008

ಕಾ-ಮೂಕಜ್ಜಿಯ ಕನಸುಗಳು, ಲೇ-ಶಿವರಾಮ ಕಾರಂತ್, ಅಂ- ೪/೫

ಮೂಕಜ್ಜಿಯ ಕನಸುಗಳು ಒಂದು ಸುಲಭದ ಕಾದಂಬರಿಯಲ್ಲ. ಒಮ್ಮೆ ಓದಲು ಕುಳಿತು, ಪುಸ್ತಕ ಮಡಿಚಿಟ್ಟಿದ್ದು ಉಂಟು. ಯಾಕೆ ಹೀಗಿದೆ? ಒಂದಕ್ಕೊಂದು ಸಂಬಂಧವಿಲ್ಲ. ಒಂದೇ ತೆರೆನಾದ ಕತೆಯು ಇಲ್ಲ. ಇದು ಓದುಗರನ್ನು ಎತ್ತ ಕೊಂಡೊಯ್ಯುತ್ತಿದೆ? ಹೀಗೆ ಅನೇಕ ಪ್ರಶ್ನೆಗಳು ನನ್ನಲ್ಲಿ ಮೂಡಿದವು.

ಅದೇಕೋ ಏನೋ ಇತ್ತೀಚಿಗೆ ಮತ್ತೊಮ್ಮೆ ಓದುವ ಹಂಬಲ ಹೆಚ್ಚಾಯಿತು. ಆದರೆ ಈಬಾರಿ ನಾನು ಓದುವ ಮಾರ್ಗವನ್ನು ಅರಿತಿದ್ದೆ. ಇದನ್ನು ಕತೆ/ಕಾದಂಬರಿ ರೀತಿ ಓದಿದರೆ ಖಂಡಿತ ಅರ್ಥವಾಗದು ಎಂಬುದು ಅರಿತೆ. ಇದೊಂದು ವಿಮರ್ಶಾ ಗ್ರಂಥ.

ಈ ಗ್ರಂಥದ ಒಂದೊಂದು ಭಾಗವು ಅಮೂಲ್ಯವಾದುದು. ಮೂಕಜ್ಜಿಗೆ ಕನಸು ಬೀಳುತ್ತೆ, ಅದರಲ್ಲಿ ಯಾರ್ಯಾರೋ ಕಾಣಿಸ್ತಾರೆ, ಹೀಗೆಲ್ಲ ಯೋಚನೆ ಮಾಡಿದರೆ ಬಹುಷಃ ಕತೆಯೇ ಮುಂದುವರೆಯುವುದಿಲ್ಲ.

ನಮ್ಮ ಜೀವನದ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದಾರೆ ಲೇಖಕರು. ನಮ್ಮ ಪದ್ಧತಿಗಳು, ಆಚಾರ, ವಿಚಾರ, ಜೀವನ ಶೈಲಿ, ಮೂಡ ನಂಬಿಕೆಗಳು.. ಇದನ್ನೆಲ್ಲಾ ಯೋಚಿಸುತ್ತಿದ್ದರೆ ಜೀವನದಲ್ಲಿ ಜಿಜ್ಞಾಸೆ ಮೂಡುವುದು ಖಚಿತ. ಜೀವನದ ಅರ್ಥವನ್ನು ಹುಡುಕಲು ಹೊರಟಿದ್ದಾರೆ. ಲೇಖಕರ ಪ್ರಶ್ನೆಗಳು ಹಲವು ಭಾರಿ ನಮ್ಮನ್ನು ಕಾಡಿದ್ದುಂಟು. ಉತ್ತರ ಸಿಗದೇ, ಚರ್ಚಿಸದೆ ಸುಮ್ಮನಿದ್ದೇವೆ ಅಷ್ಟೆ.


ರಣರಂಗದಲ್ಲಿ ಶ್ರೀಕೃಷ್ಣನು ಮೂರು ದಿನಗಳವರೆಗೆ ಉಪದೇಶ ಮಾಡುತ್ತಿದ್ದರೂ ಕೌರವರು ಏನು ಮಾಡುತ್ತಿದ್ದರು?

ರಾವಣನನ್ನು ಹುಟ್ಟಿಸಿ, ರಾಮನು ಭೂಮಿಯಲ್ಲಿ ಜನಿಸುತ್ತಾನೆ. ರಾಮನೇ ಶಿವ ಧನಸ್ಸನ್ನು ಮುರಿಯಬೇಕು. ಯಾಕೆಂದರೆ ಲಕ್ಷ್ಮಿ ಅಂದರೆ ಸೀತೆಯನ್ನು ಬೇರೆ ಯಾರು ವರಿಸೋಕೆ ಆಗೋಲ್ಲ ಅಲ್ಲವೇ ? ಸೀತಾ ಪರಿಣಯದ ಅವಶ್ಯ ಕಥೆ ಇತ್ತ?

ದುಷ್ಟರನ್ನು ಹುಟ್ಟಿಸುವುದೇಕೆ ಹಾಗು ಕೊಲ್ಲುವುದೇಕೆ ? ಪ್ರಪಂಚದಲ್ಲಿ ಎಲ್ಲರು ಒಳ್ಳೆಯವರು ಯಾಕಾಗಬಾರದು?
ದಾಸರು ಹೆಂಡತಿಯನ್ನು ಬಿಟ್ಟು ದೇವರ ಸ್ಮರಣೆಯಲ್ಲಿ ಕಾಲ ಹಾಕಿದರೆ ಯಾವ ಕರ್ಮಕ್ಕಾಗಿ ಮದುವೆಯಾಗಬೇಕಿತ್ತು?

ಮನುಷ್ಯರೆಲ್ಲರೂ ನಿರ್ವಸ್ತ್ರದಾರಾಗಿದ್ದರೆ ನಾಚಿಕೆ /ದೈಹಿಕ ಆಕರ್ಷಣೆಯ ಅರ್ಥ ಬೇರೆ ಆಗುತ್ತಿತ್ತಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಲೇಖಕರಿಗೆ ಉದ್ಬವಿಸುತ್ತದೆ.


ನಮ್ಮ ಪುರಾತನ ಯುಗದ ಅಸ್ತಿತ್ವ, ದಾಳಿಗೊಳಗಾದ ದೇವಸ್ತಾನಗಳು. ಒಂದು ಧರ್ಮದಿಂದ ಮತ್ತೊಂದು ಧರ್ಮದ ತುಳಿತ... ಕಣ್ಮರೆಯಾದ ಅನೇಕ ಸ್ಮಾರಕಗಳು... ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಇಡಿ ಕತೆಯು ಸುಬ್ಬಣ್ಣ ಮತ್ತು ಮೂಕಜ್ಜಿಯ ನಡುವಿನ ಸಂಭಾಷಣೆಯಲ್ಲಿ ಕಾಣುತ್ತೇವೆ. ಜೀವನದ ಸತ್ಯಾಸತ್ಯತೆ ಅರಿಯಲು ಲೇಖಕರು ಮೂಕಜ್ಜಿಯ ಸಹಾಯ ಪಡೆದಿದ್ದಾರೆ ಹಾಗು ತಮ್ಮ ಮಂಡನೆಯನ್ನು ಮೂಕಜ್ಜಿಯ ಮುಖಾಂತರ ಮಂಡಿಸಿದ್ದಾರೆ.

ಇದೊಂದು ಅದ್ಬುತ ಗ್ರಂಥ. ಎಲ್ಲರು ಕೊಂಡು ಓದಬೇಕಾದ ಒಂದು ಪುಸ್ತಕ.

ಚಿ.ಸ.ನ.

Sunday, December 7, 2008

ಕಾ- ರೂಪದರ್ಶಿ- ಕ.ವಿ.ಐಯರ್- ಅಂ - ೩/೫

ಬೀಚಿ ಈ ಕಾದಂಬರಿ ಓದಿ ಕಣ್ಣೀರು ಸುರಿಸಿದ್ದರಂತೆ. ಬೀಚಿ ಅವರ "ನನ್ನ ಬಯಾಗ್ರಫಿ" ಓದಿದ ಮೇಲೆ ನನಗೆ ಈ ಪುಸ್ತಕ ಓದಬೇಕೆಂಬ ಹಂಬಲ ಹೆಚ್ಚಾಯಿತು.

ಏಸುವಿನ ಜೀವಿತವನ್ನು ಚಿತ್ರಿಸಲು ಹೊರಟ ಕಲಾವಿದ ಮೈಕಲ್ ಕಂಡದ್ದು ಅರ್ನೆಸ್ಟ್ ಎಂಬ ಅನಾಥ ಬಾಲಕನನ್ನು. ಆತನ ಮುಗ್ದತೆಯನ್ನು ಕಂಡು ಅವನನ್ನು ಏಸುವಿನ ಬಾಲ ದಿನಗಳನ್ನು ಚಿತ್ರಿಸಲು ಅವನನ್ನು ರೂಪದರ್ಶಿಯಾಗಿ ಫ್ಲೋರೆನ್ಸೆ ನಗರಕ್ಕೆ ಕರೆ ತರುತ್ತಾನೆ. ಅರ್ನೆಸ್ಟ್ ನ ಅಜ್ಜಿಗೆ ಸಾಕಷ್ಟು ಹಣ ಕೊಟ್ಟು ಏಸುವಿನ ಬಾಲ್ಯ ಜೀವನದ ಚಿತ್ರಗಳನ್ನು ಬಿಡಿಸುತ್ತಾನೆ.

ಕಡು ಬಡ ಕುಟುಂಬದ ಅರ್ನೆಸ್ಟ್ ಈ ಕೆಲಸದಿಂದ ಸ್ವಲ್ಪ ಹಣ ಗಳಿಸಿ ತನ್ನ ಅಜ್ಜಿಯೊಂದಿಗೆ ಹಿಂದಿರುಗುತ್ತಾನೆ. ಅಲ್ಲಿಂದ ಮುಂದಿನ ಅರ್ನೆಸ್ಟ್ ಜೀವನದ ಹಾಡಿ ಕರಳವಾಗಿರುತದೆ. ಇತ್ತ ಮೈಕಲ್ ಕಾರಣಾಂತರಗಳಿಂದ ಚರ್ಚ್ ನ ಕೆಲಸ ಮದ್ಯದಲ್ಲೇ ನಿಲ್ಲುತ್ತದೆ. ಇದರಲ್ಲೇ ೨೦-೨೫ ವರ್ಷಗಳು ಕಳೆದು ಹೋಗುತ್ತದೆ.
ಎಸುವಿನೊಡನೆ ಸ್ನೇಹಿತನ ರೀತಿ ಇದ್ದು ಏಸುವಿಗೆ ದ್ರೋಹ ಬಗೆಯುವ "ಜುದಾಸನ" ಚಿತ್ರಕ್ಕೆ ಒಬ್ಬ ರೂಪದರ್ಶಿಯನ್ನು ಹುಡುಕುತ್ತ ಮೈಕಲ್ ಒಬ್ಬ ಕುರೂಪಿ, ಕಳ್ಳ ನನ್ನು ಒಪ್ಪಿಸಿ ಕರೆತರುತ್ತಾನೆ... ಈತ ಒಬ್ಬ ಅತ್ಯಂತ ಕುರೂಪಿ ಆಗಿದ್ದು, ಒಂದು ಕಣ್ಣು ಇಲ್ಲದೆ... ಜನರನ್ನು ಲೂಟಿ ಮಾಡಿ ಜೀವನ ಸಾಗಿಸುತ್ತಿರುತ್ತಾನೆ.

ಈತನನ್ನು ಬಲವಂತವಾಗಿ ರೂಪದರ್ಶಿಯ ಕಾರ್ಯಕ್ಕೆ ಕರೆತಂದಾಗ... ಈತನಿಗೆ ತನ್ನ ಹಿಂದಿನದೆಲ್ಲ ನೆನಪಿಗೆ ಬರುತ್ತದೆ... ಆತನೇ ತನ್ನ ಮುದ್ದಿನ ಅರ್ನೆಸ್ಟ್ ಅಂದು ಕೇಳಿ ಮೈಕಲ್ ಮಮ್ಮಲ ಮರುಗುತ್ತಾನೆ... ಅರ್ನೆಸ್ಟ್ ನ ಜೀವನ ಚರಿತ್ರೆಯನ್ನು ಹೃದಯ ವಿದ್ರಾವಕವಾಗಿ ಇಲ್ಲಿ ಚಿತ್ರಿಸಿಲಾಗಿಧೆ..... ಪ್ರೀತಿ, ವಿಶ್ವಾಸ, ಅಂತಃಕರಣ, ಭಾವೊದ್ವೆಗಗಳು ಎಲ್ಲವನ್ನು ಐಯರ್ ರವರು ಅಚ್ಚುಕಟ್ಟಾಗಿ ಸೃಷ್ಟಿಸಿದ್ದಾರೆ.

ಇದೊಂದು ದುಷ್ಟಾಂತದ ಕಥೆ. ಎಷ್ಟೋ ಸಂದರ್ಬ ಕಣ್ತುಂಬಿ ಬರುತ್ತದೆ. ತಾಯಿಯ ಮಮಕಾರ, ತಂಗಿಯ ಅಕ್ಕರೆ, ಪ್ರೆಯಶಿಯ ಪ್ರೀತಿ ಎಲ್ಲವು ಅಚ್ಚುಕಟ್ಟಾಗಿ ಮೂಡಿ ಬಂದಿದೆ...

ಲೆನೋವೋಳ ಸೌಂದರ್ಯವನ್ನು ವರ್ಣಿಸಿರುವ ರೀತಿಯಂತೂ ವರ್ಣಿಸಲಾಗದು......

ಆದರೆ ಈ ಕಥೆಯನ್ನು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿ ಹೇಳಿರುವುದು ಸ್ವಲ್ಪ ಬೇಸರ ತರುತ್ತದೆ... ಇರೋಪ್ಯ ರಾಷ್ಟ್ರಗಳ ಜನ ಜೀವನ,ಸಂಸ್ಕೃತಿ ಯಾವುದು ಭಾರತೀಯರ ರೀತಿ ಇಲ್ಲ.... ಇಲ್ಲಿ ಬರುವ ಎಲ್ಲ ಪಾತ್ರಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ.

ಈ ಒಂದು ವಿಷಯ ಬಿಟ್ಟರೆ... ಒಂದು ಬಾರಿ ಓದಲೇ ಬೇಕಾದ ಕಾದಂಬರಿ ಇದು...

ಲೆನೋವೋಳ ಸೌಂದರ್ಯವನ್ನು ವರ್ಣಿಸಿರುವ ರೀತಿಯನ್ನು ನೋಡಿದರೆ... ಅವರ "ಶಾಂತಲ" ಕಾದಂಬರಿಯನ್ನು ಓದಲೇ ಬೇಕೆಂದು ಮನಸ್ಸಾಗುತ್ತದೆ...

ಚಿ.ಸ.ನ.

ಕಾ- ಕಾಮಿನಿ ಕಾಂಚನ - ಲೇ- ಆ.ನ.ಕೃ - ಅಂ - ೧/೫

ನನ್ನ ಸಲಹೆ ಕೇಳಿದರೆ ಇದನ್ನು ಓದುವ ಅಗತ್ಯ ಇಲ್ಲ ಅನ್ನಿಸುತ್ತೆ.
ಏನಿದೆ ಅಂಥ ಓದಬೇಕಾಗಿದೆ....
ಲಕ್ಷ್ಮಯ್ಯ ಹೆಣ್ಣು , ಹೊನ್ನಿನ ಆಸೆಗೆ ಬಿದ್ದು ತನ್ನ ಜೀವನ ಹಾಳು ಮಾಡಿ ಕೊಳ್ಳುವ ಕಥೆಯನ್ನು ೨೧೬ ಪುಟಗಳಲ್ಲಿ ಓದಬೇಕೆ?? ಅದು ಒಂದು ರೀತಿಯಲ್ಲಿ ಇದು ಅಪೂರ್ಣ ಕಥಾನಕವೇ ... ಅಥವಾ... ಲಕ್ಷ್ಮಯ್ಯ್ಯನ ಜೀವನ ಕವಲು ಒಡೆದ ದಾರಿಯಲ್ಲಿ ನಿಂತಿದೆ ಎಂದು ಕಥೆ ಮುಗಿಯಿತೆ...
ಲಕ್ಷ್ಮಯ್ಯ್ಯನ ಜೀವನ "ಜ್ವಾಲ" ಎಂಬ ವ್ಯಭಿಚಾರಿ ಹೆಣ್ಣಿನಿಂದ ಹಾಳಾಗುವ ಕಥೆ ಇದು. ಜೊತೆಗೆ ಕೆಟ್ಟ ಸಹವಾಸ ಬೇರೆ ಮಾಡಿ ಲಕ್ಷ್ಮಯ್ಯ್ಯ ಅಡ್ಡ ದಾರಿ ಹಿಡಿದಿದ್ದ....

೫೦ ರ ದಶಕದಲ್ಲಿ ವ್ಯಭಿಚಾರಿ ಹೆಣ್ಣು ಮದ್ಯಪಾನ ಹಾಗು ಧೂಮ ಪಾನ ವ್ಯಸನಿ ಅಂದರೆ ನಂಬುವುದು ಕಷ್ಟದ ಸಂಗತಿಯೇ... ಒಂದು ವಠಾರದ ಜೀವನ, ದ್ವೇಷ ಅಸೂಯೆಯ ನಡುವೆ ಜೀವನ... ಕೆಟ್ಟು ಪಟ್ಟಣಕ್ಕೆ ಬಂದರು ಅನ್ನೋ ಹಾಗೆ ರಂಗಯ್ಯ ಬೆಂಗಳೂರಿಗೆ ಬಂದು ನೆಲಸುವುದು.. ಎಲ್ಲ ಚೆನ್ನಾಗಿ ಬಿಂಬಿತವಾಗಿದೆ ಬಹುಷಃ ಈ ಕಥೆ ೫೦ ರ ದಶಕಕ್ಕೆ ಸರಿ ಹೊಂದುತ್ತಿತ್ತೋ ಏನೋ...

ಹಾಳಾಗುವ ವಿಧಾನಗಳು ಈಗ ಬೇಕಾದಷ್ಟಿದೆ :)

ಚಿ.ಸ.ನ.

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...