Saturday, January 31, 2009

ಕಾ: ಭೀಮ ಕಾಯ ಲೇ : ಭೈರಪ್ಪ

ಭೀಮ ಕಾಯ ಒಂದು ಸರಳ ಸುಂದರ ವಿಭಿನ್ನ ಪ್ರೇಮ ಕಥಾನಕ. ಕಥೆ ಸರಳವಾಗಿದ್ದರೂ ಭೈರಪ್ಪನವರ ಅಧ್ಯಯನ ಶೀಲ ಮನೋಭಾವನೆ ಅವರ ಕಾದಂಬರಿಗಳಲ್ಲಿ ಬಿಂಬಿತವಾಗಿದೆ.

ಭಿತ್ತಿ ಕಾದಂಬರಿಯಲ್ಲಿ ಭೈರಪ್ಪನವರೇ ಹೇಳುವಂತೆ ಕುಸ್ತಿ ಪಟುಗಳ ಜೀವನವನ್ನು ಬಹಳ ಹತ್ತಿರದಿಂದ ನೋಡಿದವರು. ಇಂತದ್ದೆ ಒಂದು ಕತೆ ಈ ಭೀಮಕಾಯ.

ಸುಬ್ಬು ಎಂಬಾತ ಒಬ್ಬ ಅಪ್ರತಿಮ ಕುಸ್ತಿಪಟು. ಹನುಮಂತ ಹಾಗು ಅಂಬಾ ಭವಾನಿ ದೇವರ ಭಕ್ತ. ಮೈಸೂರು ಹಾಗು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅವನನ್ನು ಮೀರಿಸಿದ ಕುಸ್ತಿ ಪಟು ಇರಲಿಲ್ಲ. ಸುಬ್ಬು ಮೈಸೂರು ಪ್ರಾಂತ್ಯಕ್ಕೆ ಒಬ್ಬ ಕೊರಪಿಟ್ ಆಗಿರುತ್ತಾನೆ. ತಂಜಾವೂರು, ಧಾರವಾಡ, ಬೆಂಗಳೂರು ಹೀಗೆ ಅನೇಕ ಪ್ರದೇಶಗಳಲ್ಲಿ ಕುಸ್ತಿ ಪಂದ್ಯದಲ್ಲಿ ಗೆದ್ದಿರುತ್ತಾನೆ.
ಭೈರಪ್ಪನವರು ಕುಸ್ತಿ ಅಂದರೇನು, ಗರಡಿ ಮನೆ ಹೇಗಿರುತ್ತದೆ?, ಕುಸ್ತಿ ಹೊಡೆತದ ವಿಧಾನಗಳಾವುವು, ಕುಸ್ತಿ ಪಂದ್ಯದಲ್ಲಿ ಆಗುವ ಮೋಸಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ. ಬೇರೆ ಬೇರೆ ಪ್ರಾಂತ್ಯದ ಕುಸ್ತಿ/ಕುಸ್ತಿ ಪಟು ಗಳು ಹೇಗಿರುತ್ತಾರೆಂದು ಸೊಗಸಾಗಿ ವಿವರಿಸುತ್ತಾರೆ.

ತನ್ನ ವೃತ್ತಿಯಲ್ಲಿ ಸುಬ್ಬುವಿಗೆ ಸ್ನೇಹಿತರು ಹಾಗು ದ್ವೇಷಿಗಳು ಇಬ್ಬರು ಇದ್ದರು.

ಇಂಥಹ ಒಬ್ಬ ಕುಸ್ತಿ ಪಟು ಪುಟ್ಟು ಅಂಥ ಸ್ನೇಹಿತನ ವಂಚನೆ ಇಂದ ಒಬ್ಬ ಸೂಳೆಯ ಗೆಳೆತನ ಬೆಳೆಸುತ್ತಾನೆ. ಆಕೆಯೇ ರಾಜಮ್ಮ.
ರಾಜಮ್ಮ ಸುಬ್ಬುವನ್ನು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತಿರುತ್ತಾಳೆ. ದಿನ ಕಳೆದಂತೆ ಸುಬ್ಬುವು ರಾಜಮ್ಮನ ಪ್ರೀತಿಗೆ ಸಂಪೂರ್ಣವಾಗಿ ಒಳಪಡುತ್ತಾನೆ. ಆಕೆಯ ಸ್ನೇಹ ಭಾವ, ಪ್ರೀತಿ, ಎಲ್ಲಕ್ಕೂ ಮನ ಸೋಲುತ್ತಾನೆ. ಆಕೆಯನ್ನು ತನ್ಮಯ ಚಿತ್ತನಾಗಿ ಪ್ರೀತಿಸ ತೊಡಗುತ್ತಾನೆ. ನಿಧಾನವಾಗಿ ಕುಸ್ತಿಯ ಅಭ್ಯಾಸವನ್ನು ಬಿಡುತ್ತಾನೆ.

ಮೈಸೂರಿಗೆ ಕೊರಪಿಟ್ ಅಂತ ಹೆಸರು ಮಾಡಿದ ಸುಬ್ಬು ಒಬ್ಬ ಸಾಧಾರಣ ಪಂಜಾಬಿ ಕುಸ್ತಿ ಪಟುವಿಗೆ ಸೋಲುತ್ತಾನೆ. ಇತ್ತ ಸುಬ್ಬುವಿನ ಸ್ನೇಹಿತ ಚಂದ್ರು ಪುತ್ತುವಿನ ಸಹಾಯದಿಂದ ರಾಜಮ್ಮ ನನ್ನು ಬೇಟಿ ಮಾಡುತ್ತಾನೆ. ಸುಬ್ಬುವು ತನ್ನ ವೃತ್ತಿ ಜೀವನವನ್ನು ಹಾಳು ಮಾಡಿ ಕೊಲ್ಲದಂತೆ ತಡೆಯಬೇಕು ಅಂದು ಬೇಡಿ ಕೊಳ್ಳುತ್ತಾನೆ. ರಾಜಮ್ಮನಿಗೆ ಚಂದ್ರುವು ಒಬ್ಬ ಅಣ್ಣನ ರೀತಿ ಕಾಣಿಸುತ್ತಾನೆ. ತಾನು ಸುಬ್ಬುವನ್ನು ಹೇಗಾದರೂ ಮೊದಲಿನಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾಳೆ. ರಾಜಮ್ಮ, ತನ್ನಂತವಳಿಂದ ಸುಬ್ಬುವಿನ ಜೀವನ ಹಾಳಾಯಿತಲ್ಲ ಎಂದು ದುಃಖ ಪಡುತ್ತಾಳೆ.

ಸುಬ್ಬುವನ್ನು ತನ್ನ ವೃತ್ತಿಯ ಕಡೆ ತಿರುಗಿಸಲು ಬಹಳ ಪ್ರಯತ್ನಿಸುತ್ತಾಳೆ. ಇತ್ತ ಸುಬ್ಬುವಿನ ತಂದೆ ಮರಿಯಪ್ಪನವರಿಗೆ ಸುಬ್ಬುವಿನ ಬಗ್ಗೆ ತಿಳಿಯುತ್ತದೆ. ತನ್ನ ಮಗನನ್ನು ಒಬ್ಬ ಅತ್ಯುತ್ತಮ ಕುಸ್ತಿ ಪಟು ವನ್ನಾಗಿ ಮಾಡಿ ತನ್ನ ಸ್ನೇಹಿತ ಬಸಪ್ಪನ ಮಗಳು ಗೌರಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೊಂಡಿರುತ್ತಾನೆ. ಮಗನ ಪರಿಸ್ಥಿತಿ ನೋಡಿ ಮರಿಯಪ್ಪನವರು ಹಾಸಿಗೆ ಹಿಡಿಯುತ್ತಾರೆ. ಸುಬ್ಬುವಿಗೆ ಕಾರಣ ತಿಳಿದಿದ್ದರೂ,

ರಾಜಮ್ಮನನ್ನು ದೂರ ಮಾಡಿ ಕೊಳ್ಳಲು ಸದ್ಯವಾಗದೆ ಖಿನ್ನನಾಗುತ್ತಾನೆ.
ಇದ್ದಕಿದ್ದ ಹಾಗೆ ಒಂದು ದಿನ ಸುಬ್ಬು ಕಾಣೆಯಾಗುತ್ತಾನೆ. ಎಷ್ಟು ಹುದುಕಿಸಿದರು ಸುಬ್ಬುವಿನ ಸುಳಿವು ಇರುವಿದಿಲ್ಲ. ರಾಜಮ್ಮ ತನ್ನಿಂದ ಹೀಗೆ ಆಯಿತೆಂದು ದುಃಖ ಪಡುತ್ತಾಳೆ. ಈ ಹೊತ್ತಿಗೆ ರಾಜಮ್ಮ ಉದರದಲ್ಲಿ ಸುಬ್ಬುವಿನ ಮಗು ಬೆಳೆಯುತ್ತಿರುತ್ತದೆ. ರಾಜಮ್ಮನಿಗೆ ಸುಬ್ಬುವಿನ ಗೆಳೆತನಕ್ಕಿಂತ ಏನು ಬೇಕಾಗಿರುವುದಿಲ್ಲ.
ಚಂದ್ರುವಿಗೆ ಸುಬ್ಬುವಿನ ಕಾಗದ ಒಂದು ಬರುತ್ತದೆ. ಸುಬ್ಬುವು ತಾನು ತನ್ನ ತಂದೆಗೆ ನಂಬಿದವರಿಗೆ ಮೋಸ ಮಾಡಿದೆನೆಂದು, ತನ್ನ ತಂದೆಯ ಆಸೆಯಂತೆ ವೃತ್ತಿಯಲ್ಲಿ ಕೊರಪಿಟ್ ಆಗಬೇಕೆಂದು, ಅಂತೋನಿ ಸಹಾಯದಿಂದ ಸೊಲ್ಲಾಪುರದ ಗರಡಿ ಮನೆಯಲ್ಲಿ ಕಲಿಯುತ್ತಿರುವುದಾಗಿ ತಿಳಿಸುತ್ತಿರುತ್ತಾನೆ. ಚಂದ್ರುವು ಸಂತಸ ಗೊಂಡು ಇತರರಿಗೂ ತಿಳಿಸಿ ಸೊಲ್ಲಾಪುರದ ಕಡೆಗೆ ಹೊರಡುತ್ತಾನೆ. ರಾಜಮ್ಮ ಸುಬ್ಬುವಿಗೆ ಒಂದು ಕಾಗದವನ್ನು ಕೊಡುತ್ತಾಳೆ.
ಚಂದ್ರು ಸುಬ್ಬು ಬದಲಾದುದನ್ನು ಕಂಡು ಸಂತೋಷ ಪಡುತ್ತಾನೆ. ಸುಬ್ಬುವಿನ ವೃತ್ತಿ ಜೀವನ ಹಾಳು ಮಾಡಲು ಮೈಲಾರಿ ಮತ್ತು ಸ್ನೇಹಿತರು ಕುತಂತ್ರ ಮಾಡಿ ರಾಜಮ್ಮನ ಪರಿಚಯ ಸುಬ್ಬುವಿಗೆ ಮಾಡಿಸಿದುದು ತಿಳಿಯುತ್ತದೆ. ಆದರೆ ರಾಜಮ್ಮ ದೇವತೆಯಂತ ಹೆಂಗಸು ಎಂಬುದು ಅರಿವಿರುತ್ತದೆ.
ಸುಬ್ಬು ಮತ್ತೆ ಮೊದಲಿನ ಸುಬ್ಬು ವಾಗಿರುತ್ತಾನೆ. ಹಲವಾರು ಕುಸ್ತಿಗಳಲ್ಲಿ ಗೆದ್ದಿರುತ್ತಾನೆ. ಚಂದ್ರು ಸುಬ್ಬುವಿಗೆ ತಿಳಿಸಿ ಪಂಜಾಬಿ ಕುಸ್ತಿ ಪಟುವಿನ ಮೇಲೆ ಬಾಜಿ ಕಟ್ಟಿಸುತ್ತಾನೆ. ಈ ಭಾರಿ ಸುಬ್ಬು ಒಂದೇ ಬಾರಿಗೆ ಪಂಜಬಿಯನ್ನು ಸೋಲಿಸಿ ಮೈಸೂರಿಗೆ ಕೊರಪಿಟ್ ಆಗುತ್ತಾನೆ.
ಸುಬ್ಬು ರಾಜಮ್ಮನ್ನನ್ನು ಬೇಟಿ ಮಾಡುತ್ತಾನೆ. ತನ್ನ ಮಗುವನ್ನು ನೋಡಿ ಸಂತೋಷ ಪಡುತ್ತಾನೆ. ರಾಜಮ್ಮ ಸುಬ್ಬುವಿಗೆ ಗೌರಿ ಯನ್ನು ಮದುವೆಯಾಗಬೇಕೆಂದು ಹಾಗು ತನ್ನ ಸ್ನೇಹವನ್ನು ಮುಂದುವರಿಸಬೇಕೆಂದು ಕೋರಿ ಕೊಳ್ಳುತ್ತಾಳೆ. ಕಡೆಗೆ ಸುಬ್ಬು ಒಪ್ಪಿ ಗೌರಿಯನ್ನು ಮದುವೆ ಮಾಡಿ ಕೊಳ್ಳುತ್ತಾನೆ. ಗೌರಿಗೆ ತನ್ನ ಜೀವನದ ಪೂರ ವೃತ್ತಾಂತ ವನ್ನು ತಿಳಿಸುತ್ತಾನೆ. ರಾಜಮ್ಮನಿಗೆ ಒಳ್ಳೆಯ ಸ್ನೇಹಿತನಾಗಿ ಮುಂದುವರೆಯುತ್ತಾನೆ.

ಕಾದಂಬರಿಯಲ್ಲಿ ರಾಜಮ್ಮನಿಗೆ ಸುಬ್ಬು ಮೋಸ ಮಾಡಿದ ಅನ್ನಿಸದರೂ, ರಾಜಮ್ಮನ ತ್ಯಾಗ ಎದ್ದು ನಿಲ್ಲುತ್ತದೆ. ಭೈರಪ್ಪನವರ ಕಾದಂಬರಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನ ಕೊಟ್ಟಿರುವುದನ್ನು ನಾವು ನೋಡಬಹುದು.
ಚಿ.ಸ.ನ.

Monday, January 19, 2009

ಕಾ :ಧರ್ಮರ್ಶಿ ಲೇ :ಭೈರಪ್ಪ ಅಂಕ :೩.೫/೫

ಇತ್ತೀಚಿಗೆ ಓದಿದ ಅತ್ಯುತ್ತಮ ಕಾದಂಬರಿಗಳಲ್ಲಿ ಇದು ಒಂದು. ಇತರೆ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅತ್ಯಾಚಾರ ದ ವಿರುದ್ದ ಧನಿ ಎತ್ತಿರುವ ಕಾದಂಬರಿಯಾಗಿದೆ. ತಲೆ ತಲಾಂತರದಿಂದ ಹಿಂದೂ ಧರ್ಮದ ಮೇಲೆ ಮತಾಂತರದ ಭೂತ ಕಾಡುತ್ತಿದೆ. ಹಿಂದೂ ಧರ್ಮದ ಕೆಲವು ನ್ಯೂನ್ಯತೆಗಳನ್ನು ವೈಭವಿಕರಿಸಿ, ಹಣದ ಆಮಿಷ ಒಡ್ಡಿ ಅಮಾಯಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವದು ಒಂದು ಕ್ರೌರ್ಯವೆ ಸರಿ.

ಧರ್ಮ ಮತ್ತು ಪ್ರೀತಿಯ ನಡುವಿನ ತೊಳಲಾಟದಲ್ಲಿ ಬಳಲುವ ನಾಯಕನ ಕತೆಯಿದು. ಈ ಕಾದಂಬರಿಯನ್ನು ಮೂರ ಭಾಗಗಳಾಗಿ ವಿಂಗಡಿಸಬಹುದು. ಪ್ರಥಮಾರ್ದದಲ್ಲಿ ಭೈರಪ್ಪನವರು ತಮ್ಮದೇ ಜೀವನದ ಕತೆಯನ್ನು ಇಲ್ಲಿ ಹೇಳಿದ್ದಾರೆ. ಸೋಮಾರಿ ತಂದೆ, ಅಕ್ಕ ಅಣ್ಣಂದಿರ ಅಕಾಲಿಕ ಮರಣ, ಮಾವನ ಮನೆಯಲ್ಲಿ ಪಟ್ಟ ಪಾಡು, ಓದಿಗಾಗಿ ಮೈಸೂರಿಗೆ ಸೇರಿದ್ದು ಹೀಗೆ......ತನ್ನ ವಿದ್ಯಾರ್ಥಿ ಜೀವನದಲ್ಲಿ ಶಂಕರ ಎಂಬ ಹಿಂದೂ ಧರ್ಮದ ಕಟ್ಟಾಳು ವಿನ ಪರಿಚಯವಾಗುತ್ತದೆ. ಸನಾತನವಾದ ಹಿಂದೂ ಧರ್ಮದ ಆಳ, ಚಿಂತನೆಗಳು, ಆಚರಣೆಗಳು, ಅದರಲ್ಲಿ ಅಡಗಿರುವ ಭಾವನೆಗಳು , ಮಹಾ ಪುರುಷರುಗಳು ಇತ್ಯಾದಿಗಳನ್ನು ತಿಳಿದು ರೋಮಂಚನಗೊಳ್ಳುತ್ತಾರೆ. ಶಂಕರ ತನ್ನ ಜೀವನವನ್ನು ಹಿಂದೂ ಧರ್ಮದ ಪ್ರಚಾರಕ್ಕಾಗಿ ಮುಡಿಪಾಗಿತ್ತಿರುವುದು, ಅವರ ಮನೆಯವರಿಂದ ಅದಕ್ಕೆ ಸಹಕಾರ ಇದರಿಂದ ಅತ್ಯಂತ ಪ್ರಭಾವಿಯಾಗಿರುತ್ತಾನೆ.
ಒಮ್ಮೆ ಕ್ರೈಸ್ತ ಪಾದ್ರಿ ಒಬ್ಬ ಹಣದ ಆಮಿಷ ಒಡ್ಡಿ ಬಡ ಹಿಂದೂ ಜನಗಳಿಗೆ ಮತಾಂತರ ಗೊಳಿಸಲು ಭಾಷಣ ಮಾಡುತ್ತಿದ್ದಾಗ ಸತ್ಯ ಸಿಡಿದಿದ್ದೆಳುತ್ತಾನೆ. ಹಿಂದೂ ವಿದ್ಯಾರ್ಥಿ ನಿಲಯಗಳಲ್ಲಿ ಹಸುವಿನ ಹಾಲಿನ ಬದಲು ಕ್ರೈಸ್ತರು ನೀಡುತ್ತಿದ್ದ ಡಬ್ಬದ ಹಾಲಿನ ವಿರುದ್ದ ನಿಲ್ಲುತ್ತಾರೆ.
ಹಿಂದೂ ಧರ್ಮದ ಆಚಾರ, ವಿಚಾರ, ಸಂಪ್ರದಾಯ, ಪದ್ಧತಿಗಳು, ಅದರಲ್ಲಿನ ಸತ್ವಗಳು ಹಿಂದೂ ಸ್ಮಾರಕಗಳು, ಇದರ ಉಳಿವೆಗಾಗಿ ತಮ್ಮ ಜೀವನ ಮುಡಿಪು ಎಂದು ಜೀವನ ಸಾಗಿಸುತ್ತ ಇರುತ್ತಾರೆ.

ಈ ನಡುವೆ ಸತ್ಯನಿಗೆ ರಾಚಮ್ಮ ಎಂಬ ಕ್ರೈಸ್ತ ಧರ್ಮದ ಮಹಿಳೆಯ ಪರಿಚಯವಾಗುತ್ತದೆ. ಆಕೆಯ ಸೇವಾ ಭಾವನೆ, ಪ್ರೀತಿ ವಿಶ್ವಾಸಗಳಿಗೆ ಧರ್ಮವನ್ನು ಮೀರಿ ಮಾರು ಹೋಗುತ್ತಾರೆ. ಧರ್ಮದ ದೃಷ್ಟಿಯಿಂದ ಆಕೆ ಇಂದ ದೂರ ಇದ್ದರು... ಸ್ನೇಹಿತನಾಗಿ ಹತ್ತಿರ ಇರಲು ಬಯಸುತ್ತಾರೆ.
ಇದು ದ್ವೀತಿಯಾರ್ದದಲ್ಲಿ ನಡೆಯುವ ಘಟನೆಗಳು. ಈ ನಡುವೆ ಬಡತನದ ಬೇಗೆ, ತಂಗಿಯ ಮಾಡುವೆ ಇತ್ಯಾದಿಗಳ ನಡುವೆ ರಾಚಮ್ಮನಿಂದ ದೂರ ಉಳಿಯುವ ಸಂಧರ್ಬ ಬರುತ್ತದೆ. ತನ್ನ ಆಪ್ತ ಮಿತ್ರನಿಗೆ ತಂಗಿಯನ್ನು ಕೊಟ್ಟು ಮಾಡುವೆ ಮಾಡಿದುದು ಒಂದು ಪ್ರಮುಕವಾದ ಘಟ್ಟ.


ಸತ್ಯ ಕಾಲೇಜು ಮೆಟ್ಟಿಲು ಹತ್ತುತ್ತಾನೆ. ತಾನು ಇಷ್ಟ ಪದದ ಅದ್ಯಪಕರ ಹೆಂಡತಿ 'ರಾಚಮ್ಮ' ಎಂದು ತಿಳಿದು ಆಶ್ಚರ್ಯ ಪಡುತ್ತಾರೆ. ಅದು ಅಲ್ಲದೆ ತಮ್ಮ ಸ್ನೇಹ ಮತ್ತೆ ಮುಂದೆ ವರೆಯುವುದು ಎಂದು ಸಂತೋಷ ಪಡುತ್ತಾರೆ.


ಈ ನಡುವೆ ರಾಚಮ್ಮನ ನಾದಿನಿ ಲಿಲ್ಲಿಯ ಪರಿಚಯವಾಗುತ್ತದೆ. ಈಕೆ ಪಕ್ಕ ಕ್ರೈಸ್ತರ ಹುಡುಗಿ. ಹಣೆಗೆ ಕುಂಕುಮ ಇಡೊಲ್ಲ, ತುಂಡು ಬಟ್ಟೆ, ತುಂಡು ಜಡೆ ಇತ್ಯಾದಿ.... ಹಿಂದೂ ಧರ್ಮದ ಆಚರ ವಿಚಾರಗಳನ್ನ ಗೇಲಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾಳೆ. ಹಿಂದೂ ಧರ್ಮದ ಮಹತ್ವವನ್ನು ತಿಳಿಸುವ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಸತ್ಯನಿಂದ ಪಡೆಯುತ್ತಾಳೆ. ಸತ್ಯನ ಜೊತೆಗಿನ ಮಾತು ಕತೆ, ಪುಸ್ತಕಗಳು ಅವಳಿಗೆ ಹಿಂದೂ ಧರ್ಮದ ಕಡೆಗೆ ಒಯ್ಯುತ್ತವೆ. ಸತ್ಯ ತಿಳಿದೋ ತಿಳಿಯದೆ ಲಿಲ್ಲಿ ಯನ್ನು ಪ್ರೀತಿಸ ತೊಡಗುತ್ತಾನೆ. ಆಕೆಯ ಸನಿಹ, ಪ್ರೀತಿಯ ಮಾತುಗಳು, ಸೇವಾ ಮಾನೋಭವ ಎಲ್ಲಕ್ಕೂ ಮಾರು ಹೋಗುತ್ತಾನೆ... ಈ ನಿರ್ವಿಕಾರ ಸಂಬಂದದ ನಡುವೆ ಧರ್ಮದ ಆಕಾರ ಬಂದು ನಿಲ್ಲುತ್ತಿರುತ್ತದೆ. ತನ್ನ ಭಾವನೊಡನೆ ತನ್ನ ಮತ್ತು ಲಿಲ್ಲಿಯ ಸಂಭಂದದ ಬಗ್ಗೆ ಚರ್ಚಿಸುತ್ತಾನೆ. ಆದರೆ ಮನೆಯವರಿಂದ ವಿರೋದವೇ ವ್ಯಕ್ತವಾಗುತ್ತದೆ.

ಮನೆಯವರ ವಿರೋದದ ನಡುವೆಯೂ ಲಿಲ್ಲಿಯನ್ನು ಮದುವೆಯಾಗಲು ಬಯಸುತ್ತಾರೆ. ಕ್ರೈಸ್ತರ ಹುಡುಗಿಯ ಮದುವೆಯಾಗಿ ಹಿಂದೂ ಧರ್ಮದ ಸಮಾಜದಲ್ಲಿ ಬದುಕುವುದು ಕಷ್ಟ ಎಂದೆನಿಸುತ್ತದೆ. ಪ್ರೀತಿಯ ಒತ್ತಡಕ್ಕೆ ಮಣಿದು ತಾನೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಲಿಲ್ಲಿಯನ್ನು ಮದುವೆಯಾಗುತ್ತಾರೆ. ಇದಕ್ಕೆ ಬಳುವಳಿಯಾಗಿ ಒಂದು ಕ್ರೈಸ್ತ ಶಾಲೆಯಲ್ಲಿ ಪ್ರಿನ್ಸಿಪಾಲ್ ಹುದ್ದೆ ಕೂಡ ಸಿಗುತ್ತದೆ.


ಪ್ರೀತಿಗೆ ಮಣಿದು ಧರ್ಮಕ್ಕೆ ಸೋತು ಜೀವನ ನಡೆಸುವುದು ಕಷ್ಟವಾಗುತ್ತದೆ. ಮನೆಯಲ್ಲಿ ಕ್ರಿಸ್ತನ ಅಂತಿಮ ಕ್ಷಣಗಳ ಚಿತ್ರಗಳು, ಎಲ್ಲೆಲ್ಲು ಶಿಳಬೆಗಳು... ತನ್ನ ಕೊರಳಲ್ಲೊಂದು ಹೀಗೆ.... ಶಾಲೆಯಲ್ಲಿ ಹಿಂದೂ ಧರ್ಮದವರಿಗೆ ಕೆಲಸವಿಲ್ಲ... ಇದ್ದರು ಮರ್ಯಾದೆ ಇಲ್ಲ... ಸತ್ಯನ ಹೆಸರು ಬಳಸಿ ಮತಾಂತರಕ್ಕೆ ಯತ್ನ... ಕ್ರೈಸ್ತರ ಡಬ್ಬದ ಹಾಲು... ಬೈಬಲ್ ಪುಸ್ತಕ ಮಕ್ಕಳ ಮೇಲೆ ಹೇರಿಕೆ...

ಇತ್ತ ಹಿಂದೂ ಸಮಾಜದಲ್ಲೂ ಸತ್ಯನಿಗೆ ಬದುಕಲು ಕಷ್ಟವಾಗುತ್ತದೆ. ಅನೇಕ ಯೋಚನೆ ಗಳು ಮನಸ್ಸಿಗೆ ಬಂದು ಮನಸ್ಸು ಗೋಜಲು ಮಾಯವಾಗುತ್ತದೆ. ಎರಡು ಸನ್ನಿವೇಶಗಳು ಸತ್ಯನನ್ನು ಖಿನ್ನತೆಗೆ ಒಳಪದಿಸುತ್ತವೆ.... ತನ್ನ ತಂದೆಯ ಶ್ರದ್ದ ಮಾಡಲು ತಮ್ಮ ಮನೆಯವರಿಂದಲೇ ಅವಕಾಶ ದೊರಕದಿರುವುದು.. ಹಾಗು ಬೇಲೂರಿಗೆ ಹೋದಾಗ ಮುಂದೆ ನಮ್ಮ ಮಕ್ಕಳು ಇದನ್ನು ನಮ್ಮದು ಎಂದು ಹೇಳಲು ಸಾದ್ಯವಿಲ್ಲ ವಲ್ಲ ಎಂದು ಮರುಗುತ್ತಾರೆ... ಸತ್ಯ ಯಾವ ಕೆಲಸದಲ್ಲೂ ಆಸಕ್ತಿ ವಹಿಸದೆ, ಖಿನ್ನತೆಯಿಂದ ಜೀವನ ಸಾಗಿಸುತ್ತ ಇರುತ್ತಾನೆ. ಲಿಲ್ಲಿಗೆ ಎಲ್ಲವು ಅರಥವಾದರು ಏನು ಮಾಡಲಾಗದೆ ಸತ್ಯನಿಗೆ ಹಿಂದೂ ಧರ್ಮದ ಸಹ ಧರ್ಮಿನಿಯ ರೀತಿ ಜೀವನ ಸಾಗಿಸುತ್ತ ಇರುತ್ತಾಳೆ.
ಒಮ್ಮೆ ಸತ್ಯ ಶಂಕರನನ್ನು ಬೇಟಿ ಮಾಡಿ ತನ್ನ ಮನಸ್ಸಿನ ತೊಳಲಾಟವನ್ನು ಅವನಿಗೆ ತಿಳಿಸುತ್ತಾನೆ. ಶಂಕರ ಸತ್ಯನ ಮನಸಿತಿತಿ ಚೆನ್ನಾಗಿ ಗೊತ್ತಿರುತ್ತದೆ. ಶಂಕರ ಸತ್ಯ ಹಾಗು ಲಿಲ್ಲಿಯನ್ನು ಆರ್ಯ ಸಮಾಜದ ವಿಧಿ ವಿಧಾನಗಳಿಂದ ಹಿಂದೂ ಧರ್ಮಕ್ಕೆ ಸೇರಿಸಿಕೊಲ್ಲುತ್ತಾನೆ.......
ಆಗ ಲಿಲ್ಲಿ ಧರ್ಮರ್ಷಿ ಆಗುತ್ತಲೇ.....
ಭೈರಪ್ಪನವರು ಧರ್ಮ ಮತ್ತು ಪ್ರೀತಿಯ ನಡುವಿನ ತೊಳಲಾಟ... ಮತಾತರದಂತ ಸ್ಮೂಕ್ಷ್ಮ ವಿಚಾರಗಳನ್ನ ಚೆನ್ನಾಗಿ ವಿಮರ್ಶಿಸಿದ್ದಾರೆ..... ಎಲ್ಲರು ಒಮ್ಮ ಓದಲೇ ಬೇಕಾದ ಪುಸ್ತಕ ಇದು...
ಚಿ.ಸ.ನ

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...