Tuesday, April 7, 2009

ರವಿಯು ಎಲ್ಲಿಗೆ ಹೋದನು?

ರವಿಯು ಎಲ್ಲಿಗೆ ಹೋದನು?
ಚೌಕಕ್ಕೆ ಭಾರಕ್ಕೆ ಸೋತಿತ್ತು ನನ್ನ ಮನ
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ

ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ

ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ

ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".

ಚಿ.ಸ.ನ.

No comments:

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...