Friday, September 2, 2016

ಕೊನೆ ಮೊದಲು

ಕೊನೆ  ಮೊದಲು

ನಾ ಮುಂದು, ತಾ ಮುಂದು, ನಾನ್ ಎಂದೋ, ನೀನ್ ಎಂದೋ
ಕೊನೆ ಎಂದೆಂದೋ, ಅರಿತರಿಯ ಬೇಕಾಗಿದೆ ಕೊನೆ ಚೆಲ್ಲುವ ಬೆಳಕ.

ಅಪ್ಪನೋ, ಮಗನೋ, ಸಖಿಯೋ, ಸಖನೂ
ಮತ್ತೊಬ್ಬನೂ.... ಮಿಂದೇಳಬೇಕಿ ಬೆಳಕಲ್ಲಿ

ಮೊದಲ ಕೊನೆಯುಂಟು, ಕೊನೆಯ ಮೊದಲುಂಟು. ಅರಿವುಂಟು ಕೊನೆಯ
ಮೊದಲುಗಳ  ಸಿಲುಕಿ ನಾವ್ ವ್ಯೂಹ ವರ್ತುಲದಿ

ಮೇಲೊಮ್ಮೆ ಕೆಳಗೊಮ್ಮೆ ಉರುಳಿ ಬಳಲುವುದೊಮ್ಮೆ ಸುಗಮ ಸಂಚಾರ
ಮತ್ತೊಮ್ಮೆ. ಗುರಿಯಿರದೆ ಬಸವಳಿದು ಮಂದಗತಿಯಲ್ಲೊಮ್ಮೊಮ್ಮೆ

ಹೀಗೇಕೆ ಅರಚುವೆ ತೆಪ್ಪಗಿರು ಸುಮ್ಮನೆ, ನಿಯತಾತ್ಮಾ ನೀನಲ್ಲ ಯಾನ ನಿನದಲ್ಲ
ಶಾಂತನಿರು ಪ್ರತಿಘಳಿಗೆ ದಡ ಸೇರಿ ಕರಗುವೆ ನೀ ನಿನ್ನ ಮರೆಯುವೆ

ನರಸಿಂಹ ಪ್ರಸನ್ನ

No comments:

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...