Thursday, May 28, 2020

ನೀರೆ

ನೀರೆ

ಸೆರಗು ಬೀಸುತ ನಾಚಿ
ಮೇಲ್ಚಾವಣಿಯಲಿ ನೀರೆ
ಶ್ವೇತ ಸುಂದರಿ ಈಕೆ
ಕಾಣ ಬಯಸುವೆ ಮತ್ತೆ

ಕಾಫಿ ಕುಡಿಯುವ ಹೊತ್ತು
ಜೊತೆಗಿವಳ ಗಮ್ಮತ್ತು
ಬಯಸದೆ ಬಂದಿಳಿದೆ
ಮುದ ನೀಡಿ ನೀ ಮನಕೆ

ಹೊರಟೆ ಎಲ್ಲಿಗೆ ಏಕೆ
ಉಳಿಯ ಬಾರದೆ ಇಲ್ಲೇ
ಸಂಜೆ ಸಂಭ್ರಮ ಸೇರಿ
ಹೊತ್ತು ಕಳೆಯುವ ಮತ್ತೆ

ಕೆಂಪು ಕಪ್ಪಿಟ್ಟ ನಿಶೆ
ನೀ ನಿನ್ನ ಮನೆಯೊಳಗೆ
ಮತ್ತೆ ಕಾಯುವೆ ನಿನಗೆ
ತೆರೆದ ಕಿಟಕಿಯಲೊಮ್ಮೆ

ನರಸಿಂಹ ಪ್ರಸನ್ನ

Monday, February 10, 2020

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ
ನೀ ಕೊಟ್ಟ ಪ್ರೀತಿ ಹಂಚಿದೆಯೇನೋ ಅನಿಸುತ್ತಿದೆ...
ನಿನ್ನೊಡನೆಯ ಸಾಗರ ತೀರ, ತನ್ಮತೆಯ ಅತಿಸಾರ
ಸರ್ವ ಖುಷಿಯು ನಂದೆಂದು ಬೆನ್ನು ತಟ್ಟಿದ್ದೆ

ವಾರೆ ನೋಟಕೆ ಬಲಿಯಾದೆ ನಾನಂದು
ಇವಳ ನಾಚಿಕೆಯ ಹುಚ್ಚು ಮರಳಲ್ಲಿ ಗೀಚಿತ್ತು..
ಮರಳಿಗೆ ಸ್ಪರ್ಶವೋ, ಸುಖವೊ ಎರಡೂ ಸಿಕ್ಕಿತ್ತು

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಮರಳ ದಂಡೆಯಲಿ ನಾವಿಬ್ಬರೇ, ಏನೋ
ಹೊಸ ಮುಜುಗರ, ಬಲು ಸಡಗರ
ಮುಳುಗಲೊಲ್ಲದ ಸೂರ್ಯ, ನನ್ನಾಕೆಯ ರಮಿಸಿ ಕೆಂಪೇರಿದ್ದ

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಸ್ಪರ್ಶಕ್ಕೆ ಸೋತಿತ್ತು ಮನಸೆರಡು, ನೆಟ್ಟಿತ್ತು ಮೈಮನ ಹಾಯಿ ದೋಣಿಯ ಕಡೆಗೆ....
ತಂಪಾದ ತಿಳಿಗಾಳಿ ಮುತ್ತಿಟ್ಟು ಈಕೆಗೆ....
ಹಾಯ್ದು ಹೋಗಿತ್ತು ಹಾಗೆ ಸುಮ್ಮನೆ...

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಪಾದ ತೊಳೆದು ಗುರುತನಳಿಸಿ, ಕರೆ ಕೊಟ್ಟಿತು ಸಾಗರ
ಮನೆಯ ದಾರಿ ಹಿಡಿದ ನಮಗೆ, ಸಂಜೆ ಬರುವ ಕಾತುರ
ನೀವಳಿಸಿ ದೃಷ್ಟಿ ತೆಗೆದು ಮಿಂಚು ಮೆಚ್ಚಿ ನಕ್ಕಿತು

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ನರಸಿಂಹ ಪ್ರಸನ್ನ

Friday, September 2, 2016

ಕೊನೆ ಮೊದಲು

ಕೊನೆ  ಮೊದಲು

ನಾ ಮುಂದು, ತಾ ಮುಂದು, ನಾನ್ ಎಂದೋ, ನೀನ್ ಎಂದೋ
ಕೊನೆ ಎಂದೆಂದೋ, ಅರಿತರಿಯ ಬೇಕಾಗಿದೆ ಕೊನೆ ಚೆಲ್ಲುವ ಬೆಳಕ.

ಅಪ್ಪನೋ, ಮಗನೋ, ಸಖಿಯೋ, ಸಖನೂ
ಮತ್ತೊಬ್ಬನೂ.... ಮಿಂದೇಳಬೇಕಿ ಬೆಳಕಲ್ಲಿ

ಮೊದಲ ಕೊನೆಯುಂಟು, ಕೊನೆಯ ಮೊದಲುಂಟು. ಅರಿವುಂಟು ಕೊನೆಯ
ಮೊದಲುಗಳ  ಸಿಲುಕಿ ನಾವ್ ವ್ಯೂಹ ವರ್ತುಲದಿ

ಮೇಲೊಮ್ಮೆ ಕೆಳಗೊಮ್ಮೆ ಉರುಳಿ ಬಳಲುವುದೊಮ್ಮೆ ಸುಗಮ ಸಂಚಾರ
ಮತ್ತೊಮ್ಮೆ. ಗುರಿಯಿರದೆ ಬಸವಳಿದು ಮಂದಗತಿಯಲ್ಲೊಮ್ಮೊಮ್ಮೆ

ಹೀಗೇಕೆ ಅರಚುವೆ ತೆಪ್ಪಗಿರು ಸುಮ್ಮನೆ, ನಿಯತಾತ್ಮಾ ನೀನಲ್ಲ ಯಾನ ನಿನದಲ್ಲ
ಶಾಂತನಿರು ಪ್ರತಿಘಳಿಗೆ ದಡ ಸೇರಿ ಕರಗುವೆ ನೀ ನಿನ್ನ ಮರೆಯುವೆ

ನರಸಿಂಹ ಪ್ರಸನ್ನ

Tuesday, May 5, 2009

ಇಷ್ಟು ಕಾಲ ಒಟ್ಟಿಗಿದ್ದು

ರಚನೆ : ಹೆಚ್. ಎಸ್. ವೆಂಕಟೇಶಮೂರ್ತಿ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವಾ?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು hayidONige....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ....ಮಣ್ಣ
ಮುತ್ತು ದೊರಕಿತೇನು ನೀಲಿ ಬಾನಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇನು ಕನ್ನಡಿಯ ಪಾಲಿಗೆ....?

Saturday, April 25, 2009

ಸುಪ್ರಭಾತ

ಸುಪ್ರಭಾತ

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಂದ ಮಾಮನು ಮನೆಗೆ ಹೊರಟಾಯಿತು.
ಮೂಢಣದಿ ಕಿರಣಗಳು ಮನೆ ಸೇರಿತು
ಚುಕ್ಕಿ ಬಾನಲಿ ಕೂಡ ಮರೆಯಾಯಿತು
ಪಕ್ಷಿ ಸಂಕುಲ ಎದ್ದು ಹಾರಾಡಿತು

ಗಂಟೆ ನಾದದಿ ಗುಡಿಯು ತೆರೆದಾಯಿತು
ವೇದ ಘೋಷದಿ ದಿನವು ಶುರುವಾಯಿತು
ಮಂಜು ಎಲೆಗಳ ಮೇಲೆ ನಲಿದಾಡಿತು
ಮನೆಯ ಮುಂದಿನ ರಂಗೋಲಿ ಕುಣಿದಾಡಿತು.

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಿ.ಸ.ನ

Tuesday, April 7, 2009

ರವಿಯು ಎಲ್ಲಿಗೆ ಹೋದನು?

ರವಿಯು ಎಲ್ಲಿಗೆ ಹೋದನು?
ಚೌಕಕ್ಕೆ ಭಾರಕ್ಕೆ ಸೋತಿತ್ತು ನನ್ನ ಮನ
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ

ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ

ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ

ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".

ಚಿ.ಸ.ನ.

Saturday, April 4, 2009

ಪುಂಡನ ಏರ‍ೋಪ್ಲೇನು

ಪುಂಡನ ಏರ‍ೋಪ್ಲೇನು

ಡೊಳ್ಳು ಹೊಟ್ಟೆಯ
ಉದ್ದನೆ ಮೂತಿಯ
ಕೆಂಪನೆ ಬತ್ತಿಯ
ನಾಲ್ಕು ಚಕ್ರದ ಗಾಡಿ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

ಪುಂಡನು ನೂಕುತ
ಪುಂಡನು ಆಡುತ
ಪುಂಡನು ಒದೆಯುತ
ಪುಂಡನು ಎಸೆಯುತ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

ಎಡಗೈಲಿ ಮೂತಿ
ಬಲಗೈಲಿ ಹೊಟ್ಟೆ
ತಲೆಮೇಲೆ ಚಕ್ರ
ಚೂರ್ ಚೂರ್ ಕೆಂಪನೆ ಬತ್ತಿ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

- ಚಿ.ಸ.ನ

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...