ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ
ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ
ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ
-ಬಿ ಆರ್ ಲಕ್ಷ್ಮಣರಾವ್.
Subscribe to:
Post Comments (Atom)
ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )
ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...
-
ರೋಸೆವಿಲೆನಲ್ಲಿ ಉಪಾಕರ್ಮ... ಅಲಾರಂ ಗಡಿಯಾರ ಬೆಳಿಗ್ಗೆ ೫ ಗಂಟೆಗೆ ಹೊಡೆದು ಕೊಳ್ಳುತ್ತಾ ಇತ್ತು. ಎದ್ದು ತಲೆ ಮೇಲೆ ಮಟೊವರೆಗೂ ಸುಮ್ಮನೆ ಇರಲಿಲ್ಲ. ಕಡೆಗೂ ತಲೆ ಮೇಲೆ ಮಟ್...
-
ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ.... ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ ನೀ ಕೊಟ್ಟ ಪ್ರೀತಿ ಹಂಚಿದೆಯೇನೋ ಅನಿಸುತ್ತಿದೆ... ನಿನ್ನೊಡನೆಯ ಸಾಗರ ತೀರ, ತನ್ಮತೆಯ ...
-
ಆ ನಾಲ್ಕು ಜನ... ಆ ನಾಲ್ಕು ಜನ ಪುಂಡು ಹುಡುಗರೇ... ಒಬ್ಬಬ್ಬರಿಗೆ ಒಂದೊಂದು ಅಡ್ಡ ಹೆಸರುಗಳು....ಎಲ್ಲರು ಪ್ರಾಯಕ್ಕೆ ಬಂದಿರೋರೆ..... ಮೊದಲನೆಯವನು ಕರಿಯ, ದಪ್ಪಗೆ, ಕಪ್...
No comments:
Post a Comment